ಈ ವಿಚಾರವಾಗಿ ಪಿ.ಡಿ.ಓರವರು ಯಾವುದೇ ದಾಖಲೆಗಳು ಮೇಲಧಿಕಾರಿಗಳ ವಿಚಾರಣೆಯಲ್ಲಿ ಯಾವದೇ ಮಾಹಿತಿಯನ್ನು ಸಲ್ಲಿಸದೇ ಇದ್ದು ವಿಪರ್ಯಾಸವಾಗಿದೆ,
ಬರದೇವನಾಳ ಗ್ರಾ.ಪಂ.ಯಲ್ಲಿ ನಡೆದ ಅವ್ಯವಹಾರದ ಕುರಿತು ಇ.ಓ . ರವರು ಖುದ್ದಾಗಿ ಗ್ರಾ.ಪಂ.ಗೆ ಭೇಟಿ ನೀಡಿ, ವಿಚಾರಣೆ ಮಾಡಿದ್ದು, ವೀರಯ್ಯ ಹಿರೇಮಠ ರವರು ಯಾವುದೇ ದಾಖಲೆಗಳು ಸಲ್ಲಿಸಿರುವುದಿಲ್ಲ, ಆದರೆ ಜೊತೆಗೆ ಹಣಮಂತಪ್ಪ ಹೆಗ್ಗರ, ಮಲ್ಲೇಶಪ್ಪಗೌಡ, ಹೊನ್ನಪ್ಪ ಚಿಕ್ಕನಟಗಿ ಇವರು ನಗದು ಪುಸ್ತಕ, ಕ್ರಿಯಾ ಯೋಜನೆ, ಬ್ಯಾಂಕ್ ಸೈಟಿಮೆಂಟ್ ಒದಗಿಸಿದ್ದು, ಆದರೆ 15 ನೇ ಹಣಕಾಸು ಕ್ರಿಯಾ ಯೋಜನೆ ಸಲ್ಲಿಸಿರುವುದಿಲ್ಲ.
ಹಾಗಾಗಿ ಕೂಡಲೇ ವೀರಯ್ಯ ಹಿರೇಮಠ, ಹಣಮಂತಪ್ಪ ಹೆಗ್ಗರ, ಮಲ್ಲೇಶಪ್ಪಗೌಡ, ಹೊನ್ನಪ್ಪ ಚಿಕ್ಕನಟಿಗಿ ಇವರನ್ನು ಅಮಾನತ್ತುಗೊಳಿಸು ಬೇಕು ಎಂದು ಹುಣಸಗಿ ತಾಲೂಕ್ ಅಧ್ಯಕ್ಷರು ಪ್ರಭು ಗೌಡ ಫೋತರೆಡ್ಡಿಯವರು ಯಾದಗಿರಿ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲೂಯಿಸ್ ಓಡಿಯರವರಿಗೆ ಮನವಿ ಸಲ್ಲಿಸಿದರು
ಇದೆ ಸಂಧರ್ಭದಲ್ಲಿ ಶಹಪುರ್ ತಾಲೂಕ ಅಧ್ಯಕ್ಷರು ಸೋಪಣ್ಣ ಹಳಿಸಗರ್ ಜಿಲ್ಲಾ ಸಂಚಾಲಕರು ನಾಗರಾಜ್ ಭೀಮಣ್ಣ ಶಹಪುರ್ ತಾಲೂಕು ಗೌರವ ಅಧ್ಯಕ್ಷರು ಮರಿಯಪ್ಪ ಬಿದರರಾಣಿ ಶಹಪುರ್ ತಾಲೂಕ್ ಉಪಾಧ್ಯಕ್ಷರು ಶ್ರೀಮಂತ್ ಉಪಸ್ಥಿತರಿದ್ದರು.
ವರದಿ : ಶಿವು ರಾಠೋಡ