ಕೊಪ್ಪಳದಲ್ಲಿ ಮೂರು ದಿನಗಳ ಕಾಲ ಹೋಮ್ ಎಕ್ಸ್‌ಪೋ : ಚೆನ್ನಕೇಶವ

Udayavani News
0
ಕೊಪ್ಪಳ: ಕೊಪ್ಪಳದಲ್ಲಿ ಇದೇ ಮೊದಲ ಬಾರಿಗೆ ಕೊಪ್ಪಳ ಕನ್ಸಲ್‌ ಟಿಂಗ್ ಸಿವಿಲ್ ಇಂಜಿನಿಯರ್ಸ್‌ ಮತ್ತು ಅರ್ಕೀಟೆಕ್ಟ್ ಅಸೋಸಿಯೇಷನ್ ವತಿಯಿಂದ ನಗರದ ಮಧುಶ್ರೀ ಗಾರ್ಡನ್ಸ್ ಜಿಲ್ಲಾಧಿಕಾರಿಗಳ ಕಚೇರಿ ಹತ್ತಿರ ಜೂ.13, 14 ಹಾಗೂ 15ರ ಮೂರು ದಿನಗಳ ಕಾಲ “ಕೊಪ್ಪಳ ಹೋಮ್ ಎಕ್ಸ್‌ಪೋ-2025" ಎಂಬ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೊಪ್ಪಳ ಕನ್ಸಲ್‌ ಟಿಂಗ್ ಸಿವಿಲ್ ಇಂಜಿನಿಯರ್ಸ್, ಅರ್ಕೀಟೆಕ್ಟ್ ಅಸೋಸಿಯೇಷನ್ ಅಧ್ಯಕ್ಷ ಹಾಗೂ ಇಂಜಿನಿಯರ್ ಚೆನ್ನಕೇಶವ ಹೇಳಿದರು.

ಬುಧವಾರ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ಅವರು, ಕಾರ್ಯಕ್ರಮದ ಉದ್ಘಾಟನೆಯನ್ನು ಗವಿಮಠದ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ನೆರವೇರಿಸುವರು, ಮುಖ್ಯ ಅತಿಥಿಗಳಾಗಿ ಕೆಪಿಸಿಇಎ ಅಧ್ಯಕ್ಷ ಶ್ರೀಕಾಂತ್ ಚೆನ್ನಾಳ ಪಾಲ್ಗೊಳ್ಳುವರು.

ಪ್ರವೇಶ ಉಚಿತವಿದ್ದು, ಪ್ರತಿದಿನ 10-30 ರಿಂದ ರಾತ್ರಿ 8 ಗಂಟೆವರೆಗೆ ಇದ್ದು,ಈಗಿನ ತಾಂತ್ರಿಕ ಉಪಕರಣಗಳನ್ನು ಬಳಸಿ ಕಟ್ಟಡ ಉಪಕರಣಗಳನ್ನು ಉಪಯೋಗಿಸುವ ಬಗ್ಗೆ ಪ್ರತಿ ಮಾಹಿತಿ ನೀಡಲಾಗುವುದು ಹಾಗೂ ಸುಮಾರು ಐವತ್ತು ಮಳಿಗೆಗಳನ್ನು ತೆರೆಯಲಾಗುತ್ತದೆ.

ಕಾರ್ಯಕ್ರಮದಲ್ಲಿ ಕಟ್ಟಡ ಸಾಮಗ್ರಿಗಳು, ಇಂಟೀರಿಯರ್, ಹೋಂಲೋನ್ಸ್, ಫರ್ನಿಚರ್ಸ್ ಗಳ ವಸ್ತು ಪ್ರದರ್ಶನವಿರುತ್ತದೆ, ಇಂತಹ ವಿಶೇಷ ಕಾರ್ಯಕ್ರಮವನ್ನು ಕೊಪ್ಪಳದಲ್ಲಿ ಹಮ್ಮಿಕೊಂಡಿದ್ದು, ಸಾರ್ವಜನಿಕರಿಗೆ ಇದರ ಮಾಹಿತಿ ಪಡೆದುಕೊಳ್ಳಬೇಕು. ಈ ಒಂದು ಕಾರ್ಯಕ್ರಮಕ್ಕೆ ತಾವುಗಳು ಆಗಮಿಸಿ ಸಹಕಾರದೊಂದಿಗೆ ನಮಗೆಲ್ಲ ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.


ಸುದ್ದಿಗೋಷ್ಠಿಯಲ್ಲಿ ಕೊಪ್ಪಳ ಕನ್ಸಲ್‌ಟಿಂಗ್ ಸಿವಿಲ್ ಇಂಜಿನಿಯರ್ಸ್, ಅರ್ಕೀಟೆಕ್ಟ್ ಅಸೋಸಿಯೇಷನ್ ಸಲಹೆಗಾರ ಪಂಪಾಪತಿ ಹುಬ್ಬಳ್ಳಿ, ಪ್ರಮೋದ್, ಕಾರ್ಯದರ್ಶಿ ಖಲೀಮ್ ಖಾನ್, ಆನಂದ್ ಉಪಸ್ಥಿತರಿದ್ದರು.

Post a Comment

0Comments

Post a Comment (0)