ಬೀದರ: ಬೀದರ ನಗರದ ಜನವಾಡ ರಸ್ತೆ ಶಹಾಗಂಜ್ ನಲ್ಲಿರುವ ಕರ್ನಾಟಕ ಸರ್ಕಾರದ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅಧ್ಯಯನ ಕೇಂದ್ರಕ್ಕೆ ಇಂದು ಸಾಯಂಕಾಲ ಜಿಲ್ಲಾಧಿಕಾರಿಗಳು ಶಿಲ್ಪಾ ಶರ್ಮಾ ರವರು ಭೇಟಿ ನೀಡಿ ಹಾಳಾಗಿರುವ ಪಾಠದ ಕೊಠಡಿಗಳ,ಕಿಟಕಿ ಬಾಗಿಲು ಪೀಠೋಪಕರಣ ಸುಣ್ಣ ಬಣ್ಣ ಮತ್ತು ಶೌಚಾಲಯ ಸೇರಿದಂತೆ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಿ ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅಧ್ಯಯನ ಕೇಂದ್ರ ಬಂದ ಆಗಿರುವ ಬಗ್ಗೆ ವಿಶ್ವವಿದ್ಯಾಲಯ ಕುಲಪತಿಗಳ ಜೊತೆ ಚರ್ಚಿಸಿ ಪುನಃ ಆರಂಭ ಮಾಡಲಾಗುವುದು ಭರವಸೆ ನೀಡಿದರು.
ಕಲ್ಯಾಣ ಕರ್ನಾಟಕ ಭಾಗದ ಜಾನಪದ ಕಲೆ ಸಾಹಿತ್ಯ ಸಂಸ್ಕೃತಿ ಉಳಿವಿಗಾಗಿ ಈ ಪ್ರಾದೇಶಿಕ ಅಧ್ಯಯನ ಕೇಂದ್ರ ಮರು ಪ್ರಾರಂಭಿಸಿ ಇಲ್ಲಿನ ವಿಧ್ಯಾರ್ಥಿ ವಿಧ್ಯಾರ್ಥಿನಿಯರಿಗೆ ನ್ಯಾಯ ಒದಗಿಸಿಕೊಡುವುದು ಉಪನ್ಯಾಸಕರ ಭರ್ತಿ ಸಿಬ್ಬಂದಿಗಳ ಭರ್ತಿ ಮಾಡುವುದಾಗಿ ತಿಳಿಸಿದರು.
ಬೆಳ್ಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಬೀದರ ಜಿಲ್ಲೆಯಲ್ಲಿ ಕಲಾ ಗ್ರಾಮ ಸ್ಥಾಪನೆ ಮಾಡು ಕುರಿತು ಸಭೆಯಲ್ಲಿ ಜಾನಪದ ಅಕಾಡೆಮಿ ಸದಸ್ಯರು ಮತ್ತು ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಅಧ್ಯಯನ ಕೇಂದ್ರ ಮುಖ್ಯಸ್ಥರು ವಿಜಯಕುಮಾರ ಸೋನಾರೆ ರವರು ಜಾನಪದ ವಿಶ್ವವಿದ್ಯಾಲಯ ಪ್ರಾದೇಶಿಕ ಕೇಂದ್ರ ಪುನಃ ಆರಂಭ ಮಾಡಿ ಈ ಭಾಗದ ವಿದ್ಯಾರ್ಥಿಗಳಿಗೆ ನ್ಯಾಯ ಕೊಡುವಂತೆ ಜಿಲ್ಲಾಧಿಕಾರಿಗಳಗೆ ಮನವಿ ಮಾಡಿಕೊಂಡಿರುವುದರಿಂದ ಜಿಲ್ಲಾಧಿಕಾರಿಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ ಸಿಂಧೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಪ್ರಾದೇಶಿಕ ಅಧ್ಯಯನ ಕೇಂದ್ರ ಕಚೇರಿ ಸಹಾಯಕ ಶ್ರೀಧರ್ ಜಾಧವ, ಸುನೀಲ ಭಾವಿಕಟ್ಟಿ, ಅಂಬರೀಶ ಮಲ್ಲೇಶಿ, ಮಾರುತಿ ಮಾಸ್ಟರ್, ಗುರು ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.