ಬೆಂಗಳೂರು ಮೇ 19 :: ಭಾರತದಲ್ಲಿ ಎಲ್ಲ ಜಾತಿ ಹಾಗೂ ಧರ್ಮದ ಜನರ ತಮ್ಮ ಸಮಾಜದ ಹಿರಿಯರಿಗೆ ಗೌರವ ಕೋಡುವುದು ಸಂಸ್ಕಾರವಾಗಿ ರೂಢಿಸಿಕೊಂಡು ಬಂದಿದ್ದಾರೆ. ಕೆಲವರು ಕೈ ಮುಗಿದು ನಮಸ್ಕರಿಸುತ್ತಾರೆ ಕೆಲವರು ಕಾಲಗೆ ಬಿದ್ದು ನಮಸ್ಕರಿಸುತ್ತಾರೆ ಇದು ಅವರ ಅವರ ಸಂಸ್ಕಾರಕ್ಕೆ ಸಂಬಂಧಿಸಿದು. ಮೀನುಗಾರ ಸಮಾಜದ ಹಿರಿಯ ಮುಖಂಡರಾದ ಪ್ರಮೋದ್ ಮದ್ವರಾಜ ರವರನ್ನು ಮೀನುಗಾರ ಸಮಾಜದ ಮೀನುಗಾರಿಕೆ ಸಚಿವ ಮಾಂಕಾಳ ವೈದ್ಯರು ಉಡುಪಿ ಕಾರ್ಯಕ್ರಮ ಭಾಗವಹಿಸಲು ಆಗಮಿಸಿದಾಗ ಮಧ್ವರಾಜರ ಕಾಲಗೆ ನಮಸ್ಕರಿಸಿದನ್ನು ರಾಜಕೀಯ ಬಣ್ಣ ಹಚ್ಚುವ ಕೆಲಸ ಮಾಡುದವರಿಗೆ ಚಪ್ಪಲಿಯಿಂದ ಹೊಡೆಯಬೇಕು ಎಂದು ರಾಜ್ಯ ಬುಡಕಟ್ಟು ಜನಾಂಗ ಸಂರಕ್ಷಣೆಯ ಸಮಿತಿ ರಾಜ್ಯಾಧ್ಯಕ್ಷರು ಹಾಗೂ ಪತ್ರಕರ್ತರ ಅಮರೇಶಣ್ಣ ಕಾಮನಕೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಇರುವ ಎಲ್ಲ ಪಕ್ಷಗಳಲ್ಲಿ ಎಲ್ಲ ಸಮಾಜದ ಮತ್ತು ಧರ್ಮದ ಮುಖಂಡರು ಇದ್ದಾರೆ ಅವರು ಪಕ್ಷ ನೋಡಿ ಗೌರವ ಕೋಡುತ್ತಾರೆ. ತಮ್ಮ ಸಮಾಜದ ಮುಖಂಡರು ಯಾವುದೇ ರಾಜಕೀಯ ಪಕ್ಷದಲ್ಲಿ ಇರಲ್ಲಿ ಗೌರವ ಕೋಡುತ್ತಾರಲ್ಲ ಅದೇ ರೀತಿಯಲ್ಲಿ ಮೀನುಗಾರ ಸಮುದಾಯದ ಹಿರಿಯ ಮುಖಂಡರಾದ ಪ್ರಮೋದ ಮದ್ವರಾಜ ರವರಿಗೆ ಸಚಿವ ಮಾಂಕಾಳ ವೈದ್ಯ ಗೌರವ ಕೊಟ್ಟಿದ್ದಾರೆ.ಅದೇನೇ ಕೆಲವು ನಾಲಾಯಕರು ಬಿಜೆಪಿ ಮುಖಂಡನಿಗೆ ಕಾಂಗ್ರೆಸ್ ಸಚಿವ ಕಾಲಗೆ ಬಿದ್ದು ನಮಸ್ಕರಿಸಿದ್ದು ಸರಿಯಲ್ಲ ಪಕ್ಷಕ್ಕೆ ಮಾಡಿದ ಅವಮಾನ ಎಂದು ಬಿಂಬಿಸುತ್ತಿರುವುದು ಸರಿಯಲ್ಲ
ಲಿಂಗಾಯತ ಸಮಾಜದ ಮುಖಂಡರಾರ ಸಾಮನೂರ ಶಿವಶಂಕರಪ್ಪ ಕಾಂಗ್ರೆಸ್ ಪಕ್ಷದಲ್ಲಿ ಇದ್ದಾರೆ ಅವರಿಗೆ ಬಿಜೆಪಿ ಲಿಂಗಾಯತ ಸಮಾಜದ ಶಾಸಕರು ಮುಖಂಡರು ಕಾಲಗೆ ನಮಸ್ಕರ ಮಾಡುವದಿಲ್ಲವೇ ಮಾಡುತ್ತಾರೆ.ಅದೇ ರೀತಿಯಲ್ಲಿ ಲಿಂಗಾಯತ ಸಮಾಜದ ಬಿ ಎಸ ಯಡಿಯೂರಪ್ಪ ಬಿಜೆಪಿ ಯವರು ಅವರಿಗೆ ಕಾಂಗ್ರೆಸ್ ಶಾಸಕರು ಸಚಿವರು ಕಾಲ ಬಿದ್ದು ನಮಸ್ಕರಾ ಮಾಡುದಿಲ್ಲವೇ ಮಾಡತ್ತಾರೆ, ಒಕ್ಕಲಿಗ ಸಮಾಜ ಕಾಂಗ್ರೆಸ್ ಮುಖಂಡರಾದ ಡಿಸಿಎಂ ಡಿಕೆ ಶಿವಕುಮಾರ್ ರವರಿಗೆ ಒಕ್ಕಲಿಗ ಸಮಾಜದ ಬಿಜೆಪಿ ಶಾಸಕರು ನಮಸ್ಕರಾ ಮಾಡುವದಿಲ್ಲವೇ ಮಾಡುತ್ತಾರೆ, ಕುರುಬ ಸಮಾಜದ ಹಿರಿಯರಾದ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರಿಗೆ ಕುರುಬ ಸಮಾಜ ಬಿಜೆಪಿ ಶಾಸಕರು ನಮಸ್ಕರಾ ಮಾಡುವದಿಲ್ಲವೇ ಮಾಡುತ್ತಾರೆ. ಇದು ಭಾರತೀಯರ ಸಂಸ್ಕಾರ ಇದಕ್ಕೆ ರಾಜಕೀಯ ಬಣ್ಣ ಹಚ್ಚುವುದು ಸರಿಯಲ್ಲ
ಸಮಾಜದ ಮುಖಂಡರು ಯಾವುದೇ ರಾಜಕೀಯ ಪಕ್ಷಗಳಲ್ಲಿ ಎಷ್ಟೇ ದೊಡ್ಡ ಹುದ್ದೆ ಅಲಂಕರಿಸಿದ್ದರು ಅಹಂಕಾರ ಮಾಡದೆ ಹಿರಿಯರಿಗೆ ಗೌರವ ಕೋಡುವ ಗುಣಹೊಂದಿರಬೇಕು ಮೀನುಗಾರ ಸಮಾಜದ ಮಾಂಕಾಳ ವೈಧ್ಯರು ಸಚಿವರಾದರು ಸಮಾಜದ ಹಿರಿಯರು ಎದುರು ಬಂದಾಗ ಕಾಲಗೆ ಬಿದ್ದು ನ ನಮಸ್ಕರಿಸುತ್ತಾರೆ ಎಂದರೆ ಅಂತವರು ಮೀನುಗಾರ ಸಮಾಜದವರು ಎಂದು ಹೇಳಿಕೋಳ್ಳುವದಕ್ಕೆ ಹೆಮ್ಮೆಯ ಎನಿಸುತ್ತದೆ ಎಂದು ಅಮರೇಶಣ್ಣ ಕಾಮನಕೇರಿ ಹೇಳಿದರು.