ಸ್ಮಾರ್ಟ್ ಕ್ಲಾಸ್ ಹಾಗೂ ಸಂತ ಸೇವಾಲಾಲ್ ಭವನ ಉದ್ಘಾಟನೆ : ವೇಣುಗೋಪಾಲ್ ನಾಯಕ.

Udayavani News
0
ಮಾರನಾಳ ತಾಂಡ : ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಜನವರಿ 2ರಂದು ಉದ್ಘಾಟನೆಗೊಂಡಿತ್ತು . ಕೊಡುಗೆದಾರರು - ಇಂಡಿಯಾ ಲಿಟರೇಶಿ ಫೌಂಡೇಶನ್ ಬೆಂಗಳೂರು ಇವರಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾರನಾಳ ತಾಂಡಾ ಶಾಲೆಯ ಸ್ಮಾರ್ಟ್ ಕ್ಲಾಸ್ ಗಾಗಿ ಅಗತ್ಯ ಇರುವ ಸುಮಾರು (1,00,000) ಒಂದು ಲಕ್ಷ ಮೌಲ್ಯದ ಪ್ರಾಜೆಕ್ಟ್ ಸಾಮಗ್ರಿಗಳನ್ನು ದೇಣಿಗೆ ನೀಡಲಾಗಿದೆ ಈ ಸಂಸ್ಥೆ ಜಿಲ್ಲಾ ಸಂಚಾಲಕರಾದ ಶ್ರೀ ಪ್ರಾಣೇಶ್ ರವರು ಶಾಲೆಗೆ ಅಳವಡಿಸಿ ಮಕ್ಕಳ ಕಲಿಕೆಗಾಗಿ ತುಂಬಾ ಉಪಯುಕ್ತವೆಂದು ಹರ್ಷ ವ್ಯಕ್ತಪಡಿಸಿದರು.. ಹಾಗೆ ಸುನಿಲ್ ಜಾದವ್ 51,000 ರೂಪಾಯಿ ಹಾಗೂ ಹಲವಾರು ಮಾರನಾಳ ತಾಂಡದ ಧಾನಿಗಳು ಕೊಡುಗೆ ರೂಪದಲ್ಲಿ ನೀಡಿದ್ದಾರೆ. ಇದರಲ್ಲಿ ಸರ್ಕಾರದ ಅನುದಾನದಲ್ಲಿ ಅಲ್ಪ ಸ್ವಲ್ಪ ಹಣವನ್ನು ಬಳಕೆ ಮಾಡಲಾಗಿದೆ. ಈ ಸ್ಮಾರ್ಟ್ ಕ್ಲಾಸ್ ನಿಂದ ನಮ್ಮ ಊರಿನ ಮಕ್ಕಳಿಗೆ ಒಂದು ಉಜ್ವಲ ಭವಿಷ್ಯ ನೀಡಲಿ ಎಂದು ಧಾನಿಗಳು ಆಶಿಸುತ್ತಾರೆ. ಜೊತೆಗೆ ಶಿಕ್ಷಣ ಇಲಾಖೆ ವತಿಯಿಂದ ಇಂಡಿಯಾ ಲಿಟ್ರೇಶಿ ಫೌಂಡೇಶನ್ ನಿರ್ದೇಶಕರಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾರನಾಳ ತಾಂಡಾ ಶಿಕ್ಷರರಾದ ಬಸಲಿಂಗಯ್ಯ ಹಿರೇಮಠ , ಗುರು ವೃಂದವತಿಯಿಂದ ಧನ್ಯವಾದಗಳು ತಿಳಿಸಿದರು.  


2024 - 25 ನೇ ಸಾಲಿನಲ್ಲಿ ನಮ್ಮ ಮಕ್ಕಳ ಭವಿಷ್ಯ ಉನ್ನತ ವಿದ್ಯೆ ಹಾಗೆ ಉನ್ನತ ಸ್ಥಾನದಲ್ಲಿ ಪ್ರಜ್ವಲಿಸಲಿ ಎಂದು ಸುರಪುರ ಶಾಸಕರು ರಾಜಾ ವೇಣುಗೋಪಾಲ ನಾಯಕ ಸ್ಮಾರ್ಟ್ ಕ್ಲಾಸ್ ಉದ್ಘಾಟಿಸಿ ಸಂತಸ ವ್ಯಕ್ತಪಡಿಸಿದರು. ಹಾಗೆ ಸಂತ ಸೇವಾಲಾಲ್ ಭವನವನ್ನು ಉದ್ಘಾಟನೆಯನ್ನು ಸಹ ಮಾಡಿದರು.

ಇದೇ ಸಂದರ್ಭದಲ್ಲಿ ಸರ್ಕಾರದ 5 ಗ್ಯಾರಂಟಿಗಳ ಬಗ್ಗೆ ನಮ್ಮ ಸರ್ಕಾರ ಯಾವ ರೀತಿ ಮಾತು ಕೊಟ್ಟಿತ್ತು ಅದೇ ರೀತಿಯಲ್ಲಿ ನಾವು ಸರ್ಕಾರವನ್ನು ನಡೆಸುತ್ತಿದ್ದೇವೆ. ಅದರ ಜೊತೆಯಲ್ಲಿ ಸುರುಪುರು ತಾಲೂಕು ಮತ್ತು ಹುಣಸಗಿ ತಾಲೂಕಿನಲ್ಲಿ ಈ 5 ಗ್ಯಾರಂಟಿಗಳ ಸದುಪಯೋಗ ಪಡೆದುಕೊಳ್ಳಿ ಎಂದು ಮತದಾರರಿಗೆ ತಿಳಿಸಿದರು..

 ಇದೇ ಸಂದರ್ಭದಲ್ಲಿ ಸುರುಪೂರ ಶಾಸಕರಾದ ರಾಜಾ ವೇಣುಗೋಪಾಲ್ ನಾಯಕ, ನಿಂಗರಾಜ್ ಬಾಚಿಮಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸುರಪುರ, ಚಂದ್ರಶೇಖರ್ ದಂಡಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹುಣಸಗಿ, ಹುಣಸಗಿಯ , ಮಲ್ಲಣ್ಣ ಸೌಕಾರ್ ಹಿರಿಯ ಕಾಂಗ್ರೆಸ್ ಮುಖಂಡರು ಚೆನ್ನಯ್ಯಸ್ವಾಮಿ ತಿಮ್ಮಣ್ಣ ಮಿಂಚೇರಿ ಎಲ್ಲಪ್ಪ ಗೌಡ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾರನಾಳ ತಾಂಡ, ಮುಖ್ಯ ಗುರುಗಳು, ಸಿಪಿಐ ಸಚಿನ್ ಚಲವಾದಿ, ಹುಣಸಗಿ ಪಿಎಸ್ಐ ಚಂದ್ರಶೇಖರ್ ಎಸ್, ಕೊಡೆಕಲ್ ಪಿಎಸ್ಐ ಅಯ್ಯಪ್ಪ ನಾರಾಯಣಪುರ ಪಿಎಸ್ಐ ರಾಜಶೇಖರ ರಾಠೋಡ , ಹಾಗೂ ಪೊಲೀಸ್ ಸಿಬ್ಬಂದಿ ವರ್ಗ ಮತ್ತು ಮಾರನಾಳ ತಾಂಡದ ಗುರು ಹಿರಿಯರು ಇನ್ನಿತರರು ಉಪಸ್ಥಿತರಿದ್ದರು.

ಜಿಲ್ಲಾ ವರದಿಗರರು : ಶಿವು ರಾಠೋಡ ಯಾದಗಿರಿ

Post a Comment

0Comments

Post a Comment (0)