ಇಳಕಲ್, ಸೆ.21 : ತಾಲ್ಲೂಕಿನಲ್ಲಿಯೇ ಪ್ರಪ್ರಥಮವಾಗಿ ಮತದಾರ ಕಾರ್ಡುಗಳಿಗೆ 100% ಆಧಾರ ಕಾರ್ಡ್ ಜೋಡಣೆ ಮಾಡಿದ್ದಕ್ಕೆ ಇಳಕಲ್ ತಾಲ್ಲೂಕು ಆಡಳಿತ ವತಿಯಿಂದ ಬಲಕುಂದಿ ತಾಂಡಾದ ಭಾಗದ ಸಂಖ್ಯೆ 247 ರ ಮತಗಟ್ಟೆ ಮಟ್ಟದ ಅಧಿಕಾರಿಗಳು ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷರಾದ ಶ್ರೀ ಪರಶುರಾಮ ಎಸ್ ಪಮ್ಮಾರ ರವರನ್ನು ಇಂದು ಗೌರವಿಸಿ ಸನ್ಮಾನ ಮಾಡಲಾಯಿತು.
ಸನ್ಮಾನ ಮಾಡಿ ಮಾತನಾಡಿದ ತಹಶಿಲ್ದಾರರಾದ ಶ್ರೀ ಬಸವರಾಜ ಮೆಳವಂಕಿ ರವರು ತಾಲ್ಲೂಕು ನೌಕರರ ಸಂಘದ ಅಧ್ಯಕ್ಷರಾಗಿದ್ದುಕೊಂಡು ಈ ಜವಾಬ್ದಾರಿ ನಿರ್ವಹಿಸಿ ಇಳಕಲ್ ತಾಲ್ಲೂಕಿನಲ್ಲಿ ಪ್ರಪ್ರಥಮವಾಗಿ 100% ಆಧಾರ ಕಾರ್ಡ್ ಜೋಡಣೆ ಮಾಡಿರುವುದು ಶ್ಲಾಘನೀಯ ಕಾರ್ಯ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿಗಳಾದ ಶ್ರೀ ಬಸವರಾಜ ಮೆಳವಂಕಿ, ನಗರಸಭೆ ಆಯುಕ್ತರಾದ ಶ್ರೀ ರಾಮಕೃಷ್ಣ ಸಿದ್ದನಕೊಳ್ಳ, ತಾಲ್ಲೂಕು ಸಿಡಿಪಿಓ ರವರಾದ ಗಿರಿತಮ್ಮಣ್ಣವರ,ಶಿಕ್ಷಣ ಸಂಯೋಜಕರಾದ ಈಶ್ವರ ಅಂಗಡಿ,ಪ್ರಭಾರಿ ಗ್ರೇಡ್ 2 ತಹಶಿಲ್ದಾರರಾದ ಚಿದಾನಂದ ವಡವಡಗಿ,ಇಳಕಲ್ ಕಂದಾಯ ನಿರೀಕ್ಷಕರಾದ ನವೀನ ಬಲಕುಂದಿ,ಬಲಕುಂದಿ ಗ್ರಾಮ ಲೆಕ್ಕಾಧಿಕಾರಿಗಳಾದ ಯಮನಪ್ಪ ವಡ್ಡರ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು, ತಾಲ್ಲೂಕಿನ ಮತಗಟ್ಟೆ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಕ್ಷಣ ಕ್ಷಣದ ಸುದ್ದಿ ಕೆಳಗಿನ ಜನಸ್ಪಂದನ ವಾಟ್ಸಾಪ್ ಗುಂಪಿನ ಲಿಂಕ್ ಬಳಸಿರಿ.
https://chat.whatsapp.com/EnPflH1YdrTKgr8itRlTe9
ಸುದ್ಧಿಯ ಲಿಂಕ್ ಓಪನ್ ಆಗದಿದ್ದರೆ *'9008329745'* ನಂಬರನ್ನು *'UDAYAVANI. NEWS'* ಎಂದು ಸೇವ್ ಮಾಡಿಕೊಳ್ಳಿ.