ಅಶೋಕ ಅಣ್ಣನ ನಿಸ್ವಾರ್ಥ ಸೇವೆಗೆ ದೊರೆತ ಪ್ರಶಸ್ತಿ: ರಾಮಣ್ಣ

Udayavani News
0
ಮಸ್ಕಿ: ತಾಲೂಕಿನ ನಂಜಲದಿನ್ನಿ ಗ್ರಾಮದ ದಲಿತ ಹೋರಾಟಗಾರ ಹಾಗೂ ಸಾಹಿತಿ ಅಶೋಕ ನಂಜಲದಿನ್ನಿ ಇವರಿಗೆ ದಲಿತ ಸಾಹಿತ್ಯ ಪರಿಷತ್ ವತಿಯಿಂದ ಡಾ. ಬಿ. ಆರ್ ಅಂಬೇಡ್ಕರ್ ಸೇವಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. 
ಏಪ್ರಿಲ್ 19 ಮಂಗಳವಾರ ದಂದು ಸಿಂಧನೂರು ತಾಲೂಕ ಪಂಚಾಯತ ಆವರಣದಲ್ಲಿ ದಲಿತ ಸಾಹಿತ್ಯ ಪರಿಷತ್ ಪರಿಷತ್ ಹಮ್ಮಿಕೊಂಡಿದ್ದ ವಾರ್ಷಿಕ ಚಟುವಟಿಕೆ ಉದ್ಘಾಟನೆ ಮತ್ತು ವಿಚಾರ ಸಂಕೀರ್ಣ ಕಾರ್ಯಕ್ರಮ ದಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಸೇವಾರತ್ನ  ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.ದಲಿತ ಹೋರಾಟಗಾರರು ಹಿರಿಯ ಅಣ್ಣಾ ರವರಿಗೆ ಪ್ರಶಸ್ತಿ ಲಭಿಸಿದ್ದು ತುಂಬಾ ಹೆಮ್ಮೆಯ ವಿಷಯ ಇವರ ನಿಸ್ವಾರ್ಥ ಸೇವೆಗಾಗಿಯೇ ಇಂತಹ ಪ್ರಶಸ್ತಿ ದೊರೆಯಲು ಸಾಧ್ಯವಾಗಿದೆ ಎಂದು ದಲಿತ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ರಾಮಣ್ಣ ಹಿರೇಭೇರಗಿ  ಹರ್ಷ ವ್ಯಕ್ತಪಡಿಸಿದ್ದಾರೆ.

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ,
ಮೊ:8197164470

Post a Comment

0Comments

Post a Comment (0)