ಗುರು ಶ್ರದ್ದೆಯೇ ಬದುಕಿನ ಗುರುತ್ವಾಕರ್ಷಣೆ ಶಕ್ತಿ: ಶಿವಕುಮಾರ ಶ್ರೀ.
ಕೊಡೇಕಲ್: ಮಾನವೀಯ ವ್ಯಕ್ತಿತ್ವದಲ್ಲಿ ಸಮಾಜ ಸೇವೆ, ಗುರುಸೇವೆ, ಭಗವದ್ ಸೇವೆ ಹೀಗೆ ಸೇವಾ ಮುಖಗಳಲ್ಲಿ ಸೇವಾ ನಿಷ್ಟತೆಯೇ ಆಧ್ಯಾತ್ಮಿಕ ಪರಂಪರೆಯ ಗುರು ಸೇವಾ, ಗುರು ವಂದನಾ ಧಾರ್ಮಿಕತೆಯಲ್ಲಿ ಸನ್ನಡತೆಯ ವ್ಯಕ್ತಿಯ ಕಾರ್ಯಶಕ್ತಿಯಾಗಿದೆ ಎಂದು ಶ್ರೀ ಗುರು ದುರುದುಂಡೇಶ್ವರ ವಿರಕ್ತಮಹಾಮಠದ ಶ್ರೀ ಶಿವಕುಮಾರ ಮಹಾಸ್ವಾಮಿಜೀ ಶ್ರೀಮಠದ ಭಕ್ತ ವೃಂದದಿಂದ ಗುರು ಪೂರ್ಣಿಮೆಯ ಗುರು ವಂದನಾ ಸ್ವೀಕರಿಸಿ ಆಶೀರ್ವಚಿಸಿದರು.
ಡಾ.ಬಿ.ಬಿ.ಬಿರಾದಾರ, ಸುರೇಶ ದೇವೂರ, ಶಿಕ್ಷಕರಾದ ಗುರುರಾಜ ಜೋಷಿ, ಕೊಟ್ರೇಶ ಕೋಳೂರ ಮಾತನಾಡಿದರು. ಸಿದ್ದಲಿಂಗಯ್ಯಸ್ವಾಮಿ, ತಾಲೂಕಾ ಕರವೇ ಅಧ್ಯಕ್ಷ ರಮೇಶ ಬಿರಾದಾರ, ಬಸಣ್ಣ ಬಂಗಾರಗುಂಡ, ಬಿ.ಬಿ.ಪಡಶೆಟ್ಟಿ, ಮಲ್ಲಣ್ಣ ಆರಲಗಡ್ಡಿ, ಸೋಮನಿಂಗಪ್ಪ ದೊರಿ, ವಿಶಾಲ ಅಂಗಡಿ, ವಿಜಯ ಮದರಿ, ತಿರುಪತಿ ಹಡಪದ, ಯಂಕಣ್ಣ ಹಗರಟಗಿ, ಕುಮಾರ ತೋಳನೂರ, ಶಿವಯ್ಯ ಸ್ವಾಮಿ, ಮುತ್ತು ಪಡಶೆಟ್ಟಿ, ಸಂಗು ಪಾಟೀಲ್, ಶ್ರೀಮಠದ ಮಹಿಳಾ ಭಕ್ತರಿದ್ದರು.
ಪೂರ್ವದಲ್ಲಿ ನಿಜಶರಣ ಹಡಪದ ಅಪ್ಪಣ್ಣನವರ ಭಾವಚಿತ್ರ ಪೂಜಿಸಿ ಜಯಂತಿಯನ್ನು ಬಸಯ್ಯ ಸ್ವಾಮಿ ಹಿರೇಮಠ ಅವರೊಂದಿಗೆ ಗುಂಡಣ್ಣ ನಗನೂರ, ಮಲ್ಲಿಕಾರ್ಜಿನ ಹಡಪದ ಭಕ್ತರ ಪರವಾಗಿ ಗುರುವಂದನಾ ಪೂಜೆ ನೆರವೇರಿಸಿದರು. ಚಂದ್ರಶೇಖರ ಐಹೊಳ್ಳಿ ನಿರೂಪಿಸಿದರು, ಹಿರಿಯ ಪತ್ರಕರ್ತ ಬಸವರಾಜ ಬ ಅಂಗಡಿ ಸ್ವಾಗತಿಸಿದರು, ರವಿ ಆರಲಗಡ್ಡಿ ವಂದಿಸಿದರು.
ವರದಿಗಾರ : ಶಿವು ರಾಠೋಡ