ಸರಕಾರಿ ಸೌಲಭ್ಯ ಸದುಪಯಿಗವಾಗಲಿ : ಪಿಎಸ್ಐ ರಾಜಶೇಖರ ರಾಠೋಡ .

Udayavani News
0
ಮಾರನಾಳ ದೊಡ್ಡ ತಾಂಡಾಮಾರನಾಳ ದೊಡ್ಡ ತಾಂಡಾ : ಕೇಂದ್ರ   ಹಾಗೂ ರಾಜ್ಯ ಸರಕಾರಗಳು ಶೈಕ್ಷಣಿಕ ಅಭಿವೃದ್ಧಿಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳನ್ನು ಸದುಪಯೋಗ ಪಡೆದು ಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ನಾರಾಯಣಪುರ ಠಾಣೆ ಪಿಎಸ್‌ಐ ರಾಜಶೇಖರ ರಾಠೋಡ್ ಹೇಳಿದರು.

ಮಾರನಾಳ ದೊಡ್ಡ ತಾಂಡಾ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಎರಡನೇ ಹಂತದ ಸಮವಸ್ತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳು ಸಹ ಪೋಷಕರ ಕನಸು ನನಸು ಮಾಡಲು ನಿರಂತರ ಅಧ್ಯಯನ ಮಾಡಬೇಕು ಎಂದು ಅವರು ಸಲಹೆ ನೀಡಿದರು.