ಗೃಹ ಇಲಾಖೆಯಲ್ಲಿ ಕ್ರೀಡೆಗಳ ಮೂಲಕ ಭ್ರಾತೃತ್ವ ಇಮ್ಮಡಿ- ಸಚಿವ ಪ್ರಿಯಾಂಕ್ ಖರ್ಗೆ ಪ್ರಶಂಸೆ.

Udayavani News
0

 

 


ಕಲಬುರಗಿ ನ 29 : ಪೊಲೀಸ್ ಇಲಾಖೆ ಬಹಳ ಉತ್ತಮವಾಗಿ ಕ್ರೀಡಾ ಕೂಟ ಆಯೋಜಿಸಿದೆ. ಈ ಮೂಲಕ ಇಲಾಖೆಯಲ್ಲಿ ಭ್ರಾತೃತ್ವ ಹಿಮ್ಮಡಿಗೊಳಿಸಲಾಗಿದೆ ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ‌ಸಚಿವರಾದ ಪ್ರಿಯಾಂಕ್ ಖರ್ಗೆ ಹೇಳಿದರು.


ನಗರದ ಡಿಎಆರ್ ಮೈದಾನದಲ್ಲಿ‌ ನಡೆದ ಪೊಲೀಸ್ ವಾರ್ಷಿಕ ಕ್ರೀಡಾಕೂಟ 2024 ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.ಜನರಿಗೆ ಖಾದಿಗಿಂತಲೂ ಖಾಕಿಯ ಮೇಲೆ ಹೆಚ್ಚಿನ ನಂಬಿಕೆ ಇದೆ. ಯಾಕೆಂದರೆ, ಯಾವುದೇ ಸಮಸ್ಯೆ ಬಂದಾಗ ಸಾರ್ವಜನಿಕರು ಪೊಲೀಸರ ಬಳಿಗೆ ಸಹಾಯಕ್ಕಾಗಿ ಧಾವಿಸುತ್ತಾರೆ. ಕಾರಣ ನಿಮ್ಮ ಮೇಲೆ ವಿಶ್ವಾಸವಿದೆ. ಇಂದು ಸಮಾಜ ನಿರ್ಭಯವಾಗಿ ಜೀವಿಸುತ್ತಿರುವುದಕ್ಕೆ ಗೃಹ ಇಲಾಖೆಯೇ ಕಾರಣವಾಗಿದೆ ಎಂದು ಕೊಂಡಾಡಿದರು.


ಸರ್ಕಾರದ ಕಾರ್ಯಕ್ರಮಗಳು ಹಾಗೂ ಯೋಜನೆಗಳು ಕಟ್ಟುನಿಟ್ಟಾಗಿ ಜನರಿಗೆ ತಲುಪುಬೇಕಾದರೆ ಗೃಹ ಇಲಾಖೆಯ ಪಾತ್ರ ಮಹತ್ವದ್ದಾಗಿದೆ. ಕಾನೂನಿನ‌ ಸಂರಕ್ಷಣೆಯೇ ಮೂಲಮಂತ್ರವಾಗಿಸಿಕೊಂಡಿರುವ ಪೊಲೀಸರ ಬಳಿಗೆ ಸಾರ್ವಜನಿಕರು ಬರುವುದಕ್ಕೆ ಇದು ಕಾರಣವಾಗಿದೆ. ಹಾಗಾಗಿ,‌ನಾನು ಪೊಲೀಸರ ಸೇವೆಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.



ನಿಮ್ಮ ಕುಟುಂಬ ವರ್ಗದವರಿಗೆ ಕೂಡಾ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಲೇಬೇಕು. ಹಬ್ಬ ಹರಿದಿನಗಳಲ್ಲಿಯೂ ಕೂಡಾ ನಿಮ್ಮ ಕರ್ತವ್ಯದ ನಡುವೆ ನೀವು ಗೈರು ಹಾಜಿರಾದರೂ ಅವರು ಎಲ್ಲವನ್ನೂ ಸೂಸುತ್ರವಾಗಿ ನಡುವೆ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ. ಈ ಹಿಂದೆ ಗುರುಮಠಕಲ್ ನಲ್ಲಿ ಪಿಎಸ್ ಐ ಒಬ್ಬರು ತಮ್ಮ ಮಗನ ಹುಟ್ಟುಹಬ್ಬದ ಕಾರ್ಯಕ್ರಮ ಬಿಟ್ಟು ಸೇವೆ ಮಾಡಿದ್ದರು ಎಂದು ನೆನೆಪಿಸಿಕೊಂಡ ಸಚಿವರು ಮತ್ತೊಮ್ಮೆ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.ಸರ್ಕಾರ ಹಾಗೂ ತಾವು ಪೊಲೀಸ್ ಇಲಾಖೆಯ ಹಿತರಕ್ಷಣೆಗೆ ಬದ್ಧವಾಗಿದ್ದು ಎಸ್ ಪಿ ಯವರ ಬೇಡಿಕೆಯಂತೆ ಪೊಲೀಸ್ ಸಿಬ್ಬಂದಿಗಳಿಗೆ ವಸತಿಗೃಹ ನಿರ್ಮಾಣ‌ ಮಾಡಲು ಪ್ರಯತ್ನಿಸಲಾಗುವುದು.‌ಇದಕ್ಕೆ 

ಈ ವರ್ಷ ರೂ 20-25 ಕೋಟಿ  ಅನುದಾನ ತೆಗೆದಿರಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಅಭಯ ನೀಡಿದರು.ಶಾಸಕ ಅಲ್ಲಮಪ್ರಭು ಮಾತನಾಡಿ, ಪೋಲಿಸರು ಉತ್ತಮ ವಾಗಿ ಕಾರ್ಯನಿರ್ವಹಿಸುತ್ತಿದ್ದು ಇತ್ತೀಚಿಗೆ ಆಸ್ಪತ್ರೆಯಲ್ಲಿ ಮಗುವಿನ ಅಪಹರಣವಾದ ಕೆಲವೇ ಗಂಟೆಗಳಲ್ಲಿ ಪತ್ತೆ ಹಚ್ಚಿ ಮಗುವನ್ನು ಕಾಪಾಡುವುದರ ಜೊತೆಗೆ ಆರೋಪಿಗಳನ್ನು ಬಂಧಿಸಿರುವುದು ರಾಜ್ಯವ್ಯಾಪಿ ಪ್ರಶಂಸೆಗೆ ಕಾರಣವಾಗಿದೆ ಎಂದರು.ಪೊಲೀಸರು ಕರ್ತವ್ಯದ ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸಿರುವುದು ಸಂತೋಷದ ವಿಚಾರವಾಗಿದೆ. ಇದು ಅವರನ್ನು ಮತ್ತಷ್ಟು ಹುರುಪಿನಿಂದ‌‌ ಕೆಲಸ ಮಾಡಲು ಸಹಕಾರಿಯಾಗುತ್ತದೆ ಎಂದು‌ ಅಲ್ಲಮಪ್ರಭು ಪಾಟೀಲ ಹೇಳಿದರು.

ವಿವಿಧ ಕ್ರೀಡೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಪಡೆದ ಪೊಲೀಸ್ ತಂಡಗಳಿಗೆ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸಿದ ಪೊಲೀಸ್ ಪುರುಷ ಹಾಗೂ ಮಹಿಳಾ ಅಧಿಕಾರಿಗಳಿಗೆ ಸ್ಮರಣಿಕೆ‌ ನೀಡಿ ಗೌರವಿಸಲಾಯಿತು.

ಎಸ್ ಪಿ ಅಡ್ಡೂರು ಶ್ರೀನಿವಾಸಲು ಸ್ವಾಗತಿಸಿದರು. ಎನ್ ಶ್ರೀನಿಧಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಂದನಾರ್ಪಣೆ ಸಲ್ಲಿಸಿದರು.

ವೇದಿಕೆಯ ಮೇಲೆ ಶಾಸಕರಾ‌ದ ಅಲ್ಲಮಪ್ರಭು ಪಾಟೀಲ, ಎಂ ವೈ ಪಾಟೀಲ, ತಿಪ್ಪಣ್ಣಪ್ಪ‌ ಕಮಕನೂರು, ಸಾಬಣ್ಣ ತಳವಾರ, ಮಹಜರ್ ಆಲಂ ಖಾನ್, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಸಿಇಓ ಭಂವರ್ ಸಿಂಗ್ ಮೀನಾ ಪೊಲೀಸ್ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು ಹಾಗೂ‌ ಕುಟುಂಬ ವರ್ಗದವರು ಭಾಗವಹಿಸಿದರು.

Post a Comment

0Comments

Post a Comment (0)