ಬೆಂಗಳೂರು, ಸೆ. 20 : ರಾಕಿಂಗ್ ಸ್ಟಾರ್ ಯಶ್ ಸ್ಯಾಂಡಲ್ವುಡ್ ಟು ನ್ಯಾಷನಲ್ ಲೆವೆಲ್ವರೆಗೆ ಸೂಪರ್ ಸ್ಟಾರ್ ಆಗಿ ಮಿಂಚುತಿರುವ ಸೂಪರ್ ಸ್ಟಾರ್. ಭಾರತೀಯ ಚಿತ್ರರಂಗದಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡಿರುವ ರಾಕಿಭಾಯ್ಗೆ, ಕೊಟ್ಯಂತರ ಅಭಿಮಾನಿ ಬಳಗವಿದೆ. ಹೀಗಿರುವಾಗಲೇ ಸೌತ್ ಸ್ಟಾರ್ ನಿರ್ದೇಶಕ ಶಂಕರ್ ದಿಢೀರ್ ಅಂತ ಕಮಲ್ ಹಾಸನ್ ಕೈ ಬಿಟ್ಟು, ಯಶ್ ಕೈ ಹಿಡಿತ್ತಾರಂತೆ.. ಅರೇ ಏನಿದು ಅಂತ ಯೋಚನೆ ಮಾಡ್ತಿದ್ದೀರಾ..? ಈ ಸ್ಟೋರಿ ಓದಿ…
ರಾಕಿಂಗ್ ಸ್ಟಾರ್ ಯಶ್..ಸ್ಯಾಂಡಲ್ವುಡ್ ಮಾಸ್ಟರ್ ಪೀಸ್..ರಾಜಾಹುಲಿ…ರಾಮಾಚಾರಿ..ರಾಕಿಭಾಯ್..‘ನಾನು ಬರೋವರೆಗೂ ಬೇರೆಯವರ ಹವಾ, ನಾನು ಬಂದ್ಮೇಲೆ ನಂದೇ ಹವಾ’ ಅಂತ ಖದರ್ ಲುಕ್ನಲ್ಲಿ ಖಡಕ್ ಡೈಲಾಗ್ ಮೇಲೆ ಡೈಲಾಗ್ ಹೊಡೆಯುತ್ತ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟು, ತನ್ನದೇ ಹವಾ ಕ್ರಿಯೇಟ್ ಮಾಡಿ ಮಿಂಚುತ್ತಿರುವ ಓನ್ ಎಂಡ್ ಓನ್ಲಿ ಹೀರೋ ಅಂದ್ರೆ ರಾಕಿಂಗ್ ಸ್ಟಾರ್ ಯಶ್.
ರಾಕಿಂಗ್ ಸ್ಟಾರ್ ಯಶ್ ಸ್ಯಾಂಡಲ್ವುಡ್ನ ಯೂತ್ ಐಕಾನ್.. ಈ ಮಾಸ್ಟರ್ ಪೀಸ್ ಸಿನಿಮಾ ಅಂದ್ರೆ ಸಾಕು ಅಭಿಮಾನಿಗಳು ಹುಚ್ಚೆದ್ದು ಕುಣಿತ್ತಾರೆ. ಅಷ್ಟರ ಮಟ್ಟಿಗೆ ಯಶ್ ಫ್ಯಾನ್ಸ್ ಫಾಲೋಯಿಂಗ್ ಹೊಂದಿದ್ದಾರೆ. ಇನ್ನು ರಾಕಿಭಾಯ್ ಖದರ್ ಲುಕ್, ಖಡಕ್ ವಾಯ್ಸ್, ಡಿಫರೆಂಟ್ ಮ್ಯಾನರಿಸಂಗೆ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದು, ಯಶ್ನ ಬೆಳ್ಳಿ ತೆರೆ ಮೇಲೆ ನೋಡಲು ಫ್ಯಾನ್ಸ್ ತುದಿಗಾಲಲ್ಲಿ ನಿಂತಿರ್ತಾರೆ..
ರಾಕಿಭಾಯ್ ಸ್ಯಾಂಡಲ್ವುಡ್ನ ಓಡೋ ಕುದುರೆ. ಕನ್ನಡ ಸಿನಿ ಅಭಿಮಾನಿಗಳಿಗೆ ಸಿಕ್ಕ ಮಾಸ್ಟರ್ ಪೀಸ್ ಆ್ಯಕ್ಟರ್.. ಪರದೆ ಮೇಲೆ ರಂಗು ರಂಗಾಗಿ ಮಿಂಚೋ ಅಣ್ತಮ್ಮ.. ಸ್ಯಾಂಡಲ್ವುಡ್ ತಾಕತ್ತು ಏನು ಅನ್ನೋದನ್ನ ಇಡೀ ಜಗತ್ತಿಗೆ ತೋರಿಸಿಕೊಟ್ಟ ರಾಜಾಹುಲಿ. ‘ಕೆಜಿಎಫ್’ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಟು ನ್ಯಾಷನಲ್ ಲೆವೆಲ್ವರೆಗೆ ತನ್ನದೇ ಛಾಪು ಮೂಡಿಸಿ, ನ್ಯಾಷನಲ್ ಸ್ಟಾರ್ ಆಗಿ ಮಿಂಚಿತ್ತಿದ್ದಾರೆ…ಹೀಗಾಗಿ ಯಶ್ಗೆ ಕೋಟ್ಯಂತರ ಅಭಿಮಾನಿ ಬಳಗವೇ ಇದೆ..
ಕೆಜಿಎಫ್ ಚಾಪ್ಟರ್ 2 ನಂತರ ರಾಕಿಂಗ್ ಸ್ಟಾರ್ ಯಶ್ ನಡೆ ಏನು? ರಾಕಿಂಗ್ ಸ್ಟಾರ್ 19ನೇ ಸಿನಿಮಾ ಯಾವಾಗ ಅನೌನ್ಸ್ ಆಗುತ್ತೆ. ಆ ಚಿತ್ರಕ್ಕೆ ಸಾರಥಿ ಯಾರು? ಇಂತ ಹತ್ತು ಹಲವು ಪ್ರಶ್ನೆಗಳು ರಾಕಿಭಾಯ್ ಅಭಿಮಾನಿಗಳ ಮನಸ್ಸಿನಲ್ಲಿ ಓಡಾಡುತ್ತಿದೆ. ಅಲ್ಲದೇ ಕೆಲದಿನಗಳಿಂದ ಇವರು ಯಶ್ಗೆ ಆ್ಯಕ್ಷನ್ ಕಟ್ ಹೇಳ್ತಾರಂತೆ, ಇವರಂತೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇದೀಗ ಅದೇ ರೀತಿಯಲ್ಲಿ ಮತ್ತೊಂದು ಸುದ್ದಿ ಹರಿದಾಡುತ್ತಿದ್ದು, ಇದನ್ನು ಕೇಳಿದ ರಾಕಿಭಾಯ್ ಅಭಿಮಾನಿಗಳು ಸಖತ್ ಥ್ರಿಲ್ ಆಗಿದ್ದಾರೆ.
ಕೆಜಿಎಫ್ 2 ಸಿನಿಮಾ ನೋಡಿರೋ ಪ್ರತಿಯೊಬ್ಬ ಅಭಿಮಾನಿಯು ಯಶ್ ಮುಂದಿನ ಸಿನಿಮಾದಲ್ಲಿ ಯಾವ ಲುಕ್ನಲ್ಲಿ ಕಾಣಿಸಿಕೊಳ್ಳಬಹುದು ಅಂತ ಕ್ಯಾಲ್ಕುಲೇಷನ್ ಹಾಕುತ್ತಿದ್ದಾರೆ. ಹೀಗಿರುವಾಗ್ಲೇ ಅಣ್ತಮ್ಮಾ ಮತ್ತೊಂದು ಪ್ಯಾನ್ ವರ್ಲ್ಡ್ ಸಿನಿಮಾದಲ್ಲಿ ನಟಿಸ್ತಾರೆ ಅನ್ನೋ ಟಾಕ್ ಗಾಂಧಿನಗರ ಟು ಇಡೀ ವರ್ಲ್ಡ್ ವೈಡ್ ಶುರುವಾಗಿದೆ.
ಕೆಜಿಎಫ್ 2 ಸಕ್ಸಸ್ ನಂತ್ರ ಯಶ್ ಸಾಕಷ್ಟು ಕಥೆಗಳು ಕೇಳಿ, ಸಾಲು ಸಾಲು ಸಿನಿಮಾಗಳಲ್ಲಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರಂತೆ. ಇದಲ್ಲದೇ ರಾಕಿಭಾಯ್ಗೆ ಪೂರಿ ಜಗನ್ನಾಥ್ ನಿರ್ದೇಶನ ಮಾಡಲಿದ್ದಾರೆ, ಮಫ್ತಿ ಖ್ಯಾತಿಯ ನರ್ತನ್ ಆಕ್ಷನ್ ಕಟ್ ಹೇಳುತ್ತಾರೆ ಅನ್ನೋ ಸುದ್ದಿ ಸಹ ಸಖತ್ ಸೌಂಡ್ ಮಾಡಿತ್ತು. ಇಷ್ಟೇ ಅಲ್ಲಾ ಕೆಜಿಎಫ್ ಚಾಪ್ಟರ್ 3 ಸದ್ಯದಲ್ಲಿಯೇ ಸೆಟ್ಟೇರಲಿದೆ. ಇದರಲ್ಲಿ ರಾಕಿಭಾಯ್ ಪೂಜಾ ಹೆಗ್ಡೆ ಜೊತೆ ಸ್ಕ್ರೀನ್ ಶೇರ್ ಮಾಡಿದ್ದಾರಂತೆ ಅನ್ನೋ ಸುದ್ದಿ ಸಹ ಹರಿದಾಡ್ತಿತ್ತು. ಈಗ ಭಾರತದ ಖ್ಯಾತ ನಿರ್ದೇಶಕ ಶಂಕರ್, ಯಶ್ಗೆ ಆ್ಯಕ್ಷನ್ ಕಟ್ ಹೇಳ್ತಾರೆ ಅನ್ನೋ ಸುದ್ದಿ ಜೋರಾಗಿದೆ.
ಹೌದು ಶಂಕರ್ ರಾಕಿ ಭಾಯ್ಗೆ ಆಕ್ಷನ್ ಕಟ್ ಹೇಳಲಿದ್ದು ಈ ಸಿನಿಮಾಗೆ ಬಾಲಿವುಡ್ನ ಖ್ಯಾತ ನಿರ್ಮಾಪಕ ಕರಣ್ ಜೋಹರ್ ಬಂಡವಾಳ ಹೂಡಲಿದ್ದಾರಂತೆ. ಇಷ್ಟೇ ಅಲ್ಲಾ ಗುರು ಈ ಸಿನಿಮಾದ ಬಜೆಟ್ ಕೇಳಿದ್ರೆ ನೀವು ಶಾಕ್ ಆಗ್ತೀರಾ.. ಹೌದು ಬರೋಬ್ಬರಿ 1000 ಕೋಟಿ ಬಜೆಟ್ನಲ್ಲಿ ಯಶ್-ಶಂಕರ್ ಕಾಂಬಿನೇಷನ್ ಹೊಸ ಸಿನಿಮಾ ಮೂಡಿಬರ್ತಿದೆಯಂತೆ. ಇನ್ನು ಮೂಲಗಳ ಪ್ರಕಾರ ಮೂವರ ಕಾಂಬಿನೇಷನ್ನ ಸಿನಿಮಾಗೆ ಎಸ್. ವೆಂಕಟೇಶನ್ ಅವರು ಚಿತ್ರಕಥೆ ಬರೆಯಲಿದ್ದಾರಂತೆ. ಸದ್ಯ ಈ ಸುದ್ದಿ ಬಾಲಿವುಡ್ ಹಾಗೂ ಸೌತ್ ಇಂಡಸ್ಟ್ರಿಗಳಲ್ಲಿ ಸಂಚಲವನ್ನೇ ಸೃಷ್ಟಿ ಮಾಡಿದೆ.
ಇನ್ನು ನಿರ್ದೇಶಕ ಶಂಕರ್, ಕಮಲ್ ಹಾಸನ್ ನಟನೆಯ ‘ಇಂಡಿಯನ್ 2’ ಸಿನಿಮಾವನ್ನ ನಿರ್ದೇಶನ ಮಾಡ್ತಿದ್ದಾರೆ. ಆದ್ರೆ ಇದರ ಚಿತ್ರೀಕರಣ ಕಾರಣಾತರದಿಂದ ನಿಧಾನವಾಗ್ತಿದೆ. ಹೀಗಾಗಿ ಶಂಕರ್, ‘ಇಂಡಿಯನ್-2’ ಸಿನಿಮಾವನ್ನ ಅರ್ಧಕ್ಕೆ ಬಿಟ್ಟು, ರಾಕಿಂಗ್ ಸ್ಟಾರ್ ಯಶ್ಗೆ ಹೊಸ ಸಿನಿಮಾ ನಿರ್ದೇಶನ ಮಾಡಲಿದ್ದಾರಂತೆ. ಅಂದ್ಹಾಗೆ ಇದ್ರಲ್ಲಿ ವಿಜಯ್ ಸೇತುಪತಿ ಸೇರಿದಂತೆ ಮಲ್ಟಿಸ್ಟಾರ್ಗಳ ಸಂಗಮವಿರಲಿದ್ದು, ಪ್ಯಾನ್ ಇಂಡಿಯಾ ಸಿನಿಮಾವಾಗಲಿದೆಯಂತೆ
ಶಂಕರ್ ಸಿನಿಮಾ ಅಂದ್ರೆ, ಅಲ್ಲಿ ಸಿಕ್ಕಾಪಟ್ಟೆ ಸ್ಪೆಷಾಲಿಟಿ ಇರುತ್ತೆ. ರಜನಿಕಾಂತ್ ಜೊತೆ ಶಿವಾಜಿ, ರೋಬೋ, ರೋಬೋ 2.O ಸೇರಿ ಹಲವು ಸೂಪರ್ಹಿಟ್ ಸಿನಿಮಾ ಕೊಟ್ಟವರು ಶಂಕರ್. ಇದೇ ಶಂಕರ್ ಈಗ ಯಶ್ ಜೊತೆ ಸಿನಿಮಾ ಮಾಡ್ತಾರೆ ಅನ್ನೋದೇ ಒಂದು ಸೆನ್ಸೇಷನಲ್. ಸದ್ಯದಲ್ಲಿಯೇ ಯಶ್ ಹಾಗೂ ಶಂಕರ್ ಹೊಸ ಸಿನಿಮಾ ಅಧಿಕೃತವಾಗಿ ರಿವೀಲ್ ಆಗಲಿದ್ದು, ಟೈಟಲ್ ಫಿಕ್ಸ್ ಆಗಲಿದೆಯಂತೆ. ಇನ್ನು ಈ ಸುದ್ದಿ ಕೇಳುತ್ತಿದಂತೆ ರಾಕಿ ಫ್ಯಾನ್ಸ್ ಫುಲ್ ಥ್ರಿಲ್ ಆಗಿದ್ದು, ಈ ಸುದ್ದಿ ಅಧಿಕೃತವಾಗಲ್ಲಿ ಅಂತ ದೇವರ ಹತ್ತಿರ ಬೇಡಿಕೊಳ್ತಿದ್ದಾರೆ.. ಇದಲ್ಲದೇ ಈ ಸಿನಿಮಾ ನೋಡಲು ವೇಟ್ ಮಾಡ್ತಿದ್ದಾರೆ.
ಕ್ಷಣ ಕ್ಷಣದ ಸುದ್ದಿ ಕೆಳಗಿನ ಜನಸ್ಪಂದನ ವಾಟ್ಸಾಪ್ ಗುಂಪಿನ ಲಿಂಕ್ ಬಳಸಿರಿ.
https://chat.whatsapp.com/EnPflH1YdrTKgr8itRlTe9
ಸುದ್ಧಿಯ ಲಿಂಕ್ ಓಪನ್ ಆಗದಿದ್ದರೆ *'9008329745'* ನಂಬರನ್ನು *'UDAYAVANI. NEWS'* ಎಂದು ಸೇವ್ ಮಾಡಿಕೊಳ್ಳಿ.