ಲಿಂಗಸುಗೂರಿನಲ್ಲಿ ಮೊಳಗಿದೆ ಬದಲಾವಣೆಯ ಕೂಗು. ಅದಕ್ಕೆ ಸಾಕ್ಷಿ ಎಂಬಂತೆ ಅನ್ಯ ಪಕ್ಷಗಳನ್ನು ದಿಕ್ಕರಿಸಿ ಆರ್.ರುದ್ರಯ್ಯ ರವರ KRPP ಪಕ್ಷಕ್ಕೆ ನೂರಾರು ಕಾರ್ಯಕರ್ತರು ಸೇರ್ಪಡೆ.

ಇಂದು ಲಿಂಗಸುಗೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪುಲಬಾವಿ ಹಾಗೂ ಮಿಂಚೇರಿ ಗ್ರಾಮದ ಮತದಾರರು ಅಮರೇಶ್ ಧಣಿ ಕಾಳಪುರು ರವರ ನೇತೃತ್ವದಲ್ಲಿ ಅನ್ಯ ಪಕ್ಷಗಳಾದ ಕಾಂಗ್ರೇಸ್, ಬಿಜೆಪಿ, ಜೆಡಿಎಸ್ ಹಾಗೂ ಇನ್ನಿತರ ಪಕ್ಷಗಳನ್ನು ಧಿಕ್ಕರಿಸಿ ವಿದ್ಯಾವಂತ ನಾಯಕರ KRPP "ಕಲ್ಯಾಣ ರಾಜ್ಯ ಪ್ರಗತಿ ಪಕ್ಷ"ದ ಅಭ್ಯರ್ಥಿ ಆರ್.ರುದ್ರಯ್ಯ ರವರನ್ನು ಅಪಾರ ಜನಸಂಖ್ಯೆಯೊಂದಿಗೆ ಮಹಿಳಾ ಮತ್ತು ಪುರುಷರು ಜೊತೆಯಾಗಿ ಸೇರ್ಪಡೆಗೊಂಡು ಬೆಂಬಲ ವ್ಯಕ್ತ ಪಡಿಸಿದರು.

ಉದಯವಾಣಿ ವಿಡಿಯೋ ಲಿಂಕ್ ಅನ್ನು ನೋಡಿ

ವಿದ್ಯಾವಂತ ನಾಯಕನಿಗೆ ಸ್ಪಂದಿಸಿದ ಜನತೆ ಧನ್ಯವಾದ ತಿಳಿಸಿ ಮಾನ್ಯ ಆರ್.ರುದ್ರಯ್ಯ ರವರು "ಫುಟ್ ಬಾಲ್" ಗುರುತಿಗೆ ನಿಮ್ಮ ಮತ ನೀಡಿ ನಿಮ್ಮವನಾದ ನನ್ನನ್ನು ಚುನಾವಣೆಯಲ್ಲಿ ಗೆಲ್ಲಿಸಿ, ನನ್ನ ನಿಸ್ವಾರ್ಥ ಸೇವೆ ನಿಮ್ಮೊಂದಿಗೆ ಸಲ್ಲಿಸುತ್ತೇನೆ ಎಂಬ ಭರವಸೆಯನ್ನು ಮುಖಂಡರು ತಿಳಿಸಿದರು.

https://youtu.be/LiMpTJ8ViiY

ಈ ಸಂದರ್ಭದಲ್ಲಿ ಸಂಗಣ್ಣ ಮಾಸ್ಟರ್ ಬಯ್ಯಾಪುರು, ಅಮರೇಶ್ ಧಣಿ ಕಾಳಪುರು, ವಿಜಯ್ ಕುಮಾರ ಹೊಸಗೌಡ್ರು ಕಾಳಪುರು, ಬಸವಲಿಂಗಪ್ಪ ಮಾಸ್ಟರ್ ಐದನಾಳ, ಶ್ರೀಶೈಲ ಅಂಗಡಿ, ಮೌನೇಶ ಐದನಾಳ ಇನ್ನಿತರ ಮುಖಂಡರೊಂದಿಗೆ ಗ್ರಾಮದ ಮತದಾರ ಪ್ರಭುಗಳು ಭಾಗಿಯಾಗಿದ್ದರು. rudraiahforlingasugur

Post a Comment

Previous Post Next Post