UDAYAVANI NEWS
ಮಸ್ಕಿ, ಜನವರಿ 05 : ನಡೆದಾಡಿದ ದೇವರು ಲಿಂಗೈಕ್ಯ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳ ಭಾವ ಚಿತ್ರಕ್ಕೆ ಇಂದು ತಾಲೂಕ ನ್ಯಾಯವಾದಿಗಳ ಸಂಘದ ಭವನದಲ್ಲಿ ಗೌರವಾನ್ವಿತ ನ್ಯಾಯಾಧೀಶರಾದ ಆನಂದಪ್ಪ .ಎಂ ರವರ ಉಪಸ್ಥಿತಿಯಲ್ಲಿ ಗೌರವ ನಮನ ಸಲ್ಲಿಸಿದರು.
ನಡೆದಾಡಿದ ದೇವರು ಲಿಂಗೈಕ್ಯ ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಶ್ರೀಗಳ ಭಾವ ಚಿತ್ರಕ್ಕೆ ಹೂವಿನ ಮಾಲೆ ಹಾಕಿ ಇಂದು ತಾಲೂಕ ನ್ಯಾಯವಾದಿಗಳ ಸಂಘದ ಭವನದಲ್ಲಿ ಗೌರವಾನ್ವಿತ ನ್ಯಾಯಾಧೀಶರಾದ ಆನಂದಪ್ಪ .ಎಂ ರವರ ಉಪಸ್ಥಿತಿಯಲ್ಲಿ ಗೌರವ ನಮನ ಸಲ್ಲಿಸಿದರು.
ಕಾರ್ಯಕ್ರಮದ ಕುರಿತು ಮಾತನಾಡುತ್ತ ಜಗತ್ತಿನಲ್ಲಿ ಏನೇ ಐಶ್ವರ್ಯ ವನ್ನು ಯಾರಿಗೇ ಕೊಟ್ಟರು ಇಬ್ಬರೂ ವ್ಯಕ್ತಿಗಳು ಮಾತ್ರ ನಿರಾಕರಿಸುತ್ತಾರೆ ಅವರಲ್ಲಿ ಒಬ್ಬರು ನಾಸ್ತಿಕ ಪೂಜ್ಯರು,ಇನ್ನೊಬ್ಬರು ಹುಚ್ಚರು ಅಂತಹವರ ಸಾಲಿನಲ್ಲಿ ಡಾಕ್ಟರೇಟ್ ಪದವಿ, ಸಂಪತ್ತು, ಐಶ್ವರ್ಯ ವನ್ನೂ ಸ್ವೀಕರಿಸದೆ ಇರುವ ಶ್ರೇಷ್ಠ ಜ್ಞಾನಯೋಗಿ ಆಧ್ಯಾತ್ಮಕ ಚಿಂತಕರೇ ಶ್ರೀ ಸಿದ್ದೇಶ್ವರ ಸ್ವಾಮೀಜಿ ಎಂದು ನ್ಯಾಯಾಧೀಶರಾದ ಆನಂದಪ್ಪ .ಎಂ ರವರ ಹೇಳಿದರು.
ನಂತರ ಮಾತನಾಡಿ ತಾಲೂಕ ನ್ಯಾಯವಾದಿಗಳ ಸಂಘದ ಅಧ್ಯಕ್ಷರಾದ ಈಶಪ್ಪ ದೇಸಾಯಿ ಶ್ರೀಗಳ ಬಾಲ್ಯದ ಜೀವನ ಮತ್ತು ಶ್ರೀಗಳು ನಡೆದು ಬಂದ ಹಾದಿಯನ್ನು ಸ್ವ ವಿವರವಾಗಿ ತಿಳಿಸಿದರು.
ಶಿವಕುಮಾರ್ ಹಿರೇ ಮಠ ವಕೀಲರು ಸಹ ಮಾತನಾಡಿದರು.
ಇದೇ ಸಂದರ್ಭದಲ್ಲಿ
ಈಶಪ್ಪ ದೇಸಾಯಿ ಅಧ್ಯಕ್ಷರು ತಾಲೂಕ ನ್ಯಾಯವಾದಿಗಳ ಸಂಘ, ಅಮರೇಗೌಡ ತಿಮ್ಮಾಪುರ ಉಪಾಧ್ಯಕ್ಷರು ವಕೀಲರ ಸಂಘ,ಆನಂದ.ಕೆ ರಾಠೋಡ್ ಕಾರ್ಯದರ್ಶಿ,ಮತ್ತು ಹೆಚ್. ವೀರಭದ್ರಪ್ಪ ವಕೀಲರು, ಬಸವರಾಜ್ ಯತ್ನಟ್ಟಿ, ನಭಿ ಶೇಡ್ಮಿ, ಪಂಪನಗೌಡ ಗುದುದೂರು,ಮಲ್ಲಪ್ಪ ನಾಗರಬೆಂಚಿ, ಶಿವು ಕುಮಾರ್ ರಂಗಾಪುರ, ಶಿವು ಚಿಕ್ಕ ಕಡಬೂರು, ಪೋಲೀಸ್ ಸಿಬ್ಬಂದಿ ಸೇರಿದಂತೆ ಇನ್ನಿತರೆ ವಕೀಲರು ಇದ್ದರು.
Tags
ಜಿಲ್ಲಾ ಸುದ್ದಿಗಳು