ವಿವಿಧೆಡೆ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆ




ಉಪ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ಏಪ್ರಿಲ್ 14 : ತಾಲೂಕಿನಾದ್ಯಂತ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ 132ನೇ ಜಯಂತಿಯನ್ನು ಸರಕಾರಿ, ಸರಕಾರೇತರ ಕಚೇರಿಗಳು, ತಾಲೂಕು ಆಡಳಿತ, ಪಟ್ಟಣ ಪಂಚಾಯಿತಿ ಸೇರಿದಂತೆ ಸಂಘ-ಸಂಸ್ಥೆಗಳು, ಗ್ರಾಮಗಳಲ್ಲಿ ಹಾಗೂ ಶಾಲಾ-ಕಾಲೇಜುಗಳಲ್ಲಿ ಸರಳತೆಯಿಂದ ಆಚರಿಸಲಾಯಿತು.

ತಾಲೂಕಿನ ಬೆಳ್ಳಿಗನೂರ ಗ್ರಾಮ, ಮಸ್ಕಿ ಶಾಖಾ ಗ್ರಂಥಾಲಯ, ಹಿರೇದಿನ್ನಿ ಗ್ರಾಮ, ಮಸ್ಕಿ ಅಂಬೇಡ್ಕರ್ ವೃತ್ತ, ಹಿರೇ ಕಡಬೂರು, ಹಾಲಾಪೂರ, ನಡೆದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ 132ನೇ ಜಯಂತಿ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಹಾಗೂ ಸರಳತೆಯಿಂದ ಆಚರಿಸಿದರು. ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಸರಳತೆಯಿಂದ ಜಯಂತಿಯನ್ನು ಆಚರಿಸಲಾಯಿತು.


ಈ ವೇಳೆ ಸುರೇಶ ಬಳಗಾನೂರು, ತುರುಮಂದೆಪ್ಪ, ರಮೇಶ ಬಿ ತಾಲೂಕ ಸಂಘಟನಾ ಸಂಚಾಲಕ,ವಂದೆಲಪ್ಪ, ಹನುಮಂತ, ಮೌನೇಶ, ಶೇಖರಪ್ಪ, ಕಚೇರಿಯ ಅಧಿಕಾರಿಗಳು,ಅಂಬೇಡ್ಕರ್ ಅಭಿಮಾನಿ ಬಳಗದವರು, ಸೇರಿದಂತೆ ಹಿರಿಯ ಮುಖಂಡರು ಭಾಗಿಯಾಗಿದ್ದರು.

Post a Comment

Previous Post Next Post