UDAYAVANI NEWS
ಮಸ್ಕಿ, ಏಪ್ರಿಲ್ 14 : ತಾಲೂಕಿನ ಮೆದಿಕಿನಾಳ ಗ್ರಾಮದ ಛಲವಾದಿ ಕಾಲೋನಿಯಲ್ಲಿ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ. ಆರ್ ಅಂಬೇಡ್ಕರ್ ರವರ 132 ನೇ ಜಯಂತಿಯನ್ನು ಸರಳತೆಯಿಂದ ಆಚರಿಸಲಾಯಿತು.
ಗ್ರಾಮದ ಛಲವಾದಿ ಕಾಲೋನಿಯ ಅಂಬೇಡ್ಕರ್ ವೃತ್ತದ ಬಳಿ ಸರ್ವ ಸಮುದಾಯದ ಮುಖಂಡರು ಹಾಗೂ ದಲಿತ ಸಮುದಾಯದ ಮುಖಂಡರುಗಳ ಸಮ್ಮುಖದಲ್ಲಿ ಅಂಬೇಡ್ಕರರ ವೃತ್ತಕ್ಕೆ ಹೂವಿನ ಹಾರ ಹಾಕಿ ನಂತರ ಕೇಕ್ ಕತ್ತರಿಸಿ ನೆರೆದ ಸರ್ವರಿಗೂ ಸಿಹಿ ತಿನಿಸು ಹಂಚುವ ಮೂಲಕ ಸಂವಿಧಾನ ಶಿಲ್ಪಿ ಡಾಕ್ಟರ್ ಬಿ. ಆರ್ ಅಂಬೇಡ್ಕರ್ ರವರ 132 ನೇ ಜಯಂತಿಯನ್ನು ಸರಳತೆಯಿಂದ ಆಚರಿಸಿದರು.
ಇದೇ ಸಂದರ್ಭದಲ್ಲಿ
ರಾಜಣ್ಣ ಪರಡ್ಡಿ, ಯಲ್ಲಪ್ಪ ಕೋಸಗಿ,ಮಲ್ಲಪ್ಪ ಗುರಿಕಾರ ಗ್ರಾ.ಪಂ ಸದಸ್ಯರು, ಅಮರೇಶ್ ನಾಯಕ ವಕೀಲರು, ಆನಂದ ರಾಠೋಡ್ ವಕೀಲರು, ಉದಯ ಕುಮಾರ್ ನಿಲಯ ಪಾಲಕರು, ಕೆನರಾ ಬ್ಯಾಂಕಿನ ಸಿಬ್ಬಂದಿ, ಶಿವಪುತ್ರಪ್ಪ ತಾತ,ಗ್ರಾಮದ ಸಮಸ್ತ ಅಂಬೇಡ್ಕರ್ ಅಭಿಮಾನೀ ಬಳಗ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Tags
ಜಿಲ್ಲಾ ಸುದ್ದಿಗಳು