ಸಂಗಪ್ಪ ನಾಲತವಾಡ(45) ಕೊಲೆಯಾದ ದುರ್ದೈವಿ. ಕಾರಿನಲ್ಲಿ ಬಂದ ದುಷ್ಕರ್ಮಿಗಳು ಅವರ ಮುಖವನ್ನು ಜಡ್ಜಿ ಕೊಲೆಗೈದಿದ್ದಾರೆ. ಕೊಲೆಯಾದ ಸಂಗಪ್ಪ ಗದ್ದನಕೇರಿ ಗ್ರಾಪಂಗೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು, ಅವರ ಪತ್ನಿ ಸಹ ಈಗಷ್ಟೇ ಮುಕ್ತಾಯಗೊಂಡ ಗ್ರಾಪಂ ಅವಧಿಗೆ ಅಧ್ಯಕ್ಷರಾಗಿದ್ದರು. ಗದ್ದನಕೇರಿ ಕ್ರಾಸ್ ನಲ್ಲಿ ಬಾರವೊಂದನ್ನು ಲೀಸ್ ಗೆ ಪಡೆದಿದ್ದರು.ಕೊಲೆಗೆ ಕಾರಣ ತಿಳಿದು ಬಂದಿಲ್ಲ.
ಘಟನಾ ಸ್ಥಳಕ್ಕೆ ಶಾಸಕ ಜೆ.ಟಿ.ಪಾಟೀಲ, ಎಸ್ಪಿ ಸಿದ್ದಾರ್ಥ ಗೋಯಲ್, ಡಿಎಸ್ಪಿ ಗಜಾನನ ಸುತಾರ, ಗ್ರಾಮೀಣ ಸಿಪಿಐ ರಾಮಣ್ಣ ಬಿರಾದಾರ, ಕಲಾದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಕೈಗೊಂಡಿದ್ದಾರೆ. ಕೊಲೆಯಿಂದಾಗಿ ಆತಂಕ ಮನೆ ಮಾಡಿದೆ