ಕಾಲಜ್ಞಾನಿ ಕೊಡೇಕಲ್ ಸುಕ್ಷೇತ್ರದಲ್ಲಿ ಯುಗಾದಿಯ ಮೊದಲನೆಯ ಪಚಾಂಗ ಪಠಣ ಜರಗಿತು.

Udayavani News
0
 ಕೊಡೇಕಲ್ : ಸರ್ವಧರ್ಮ ಸಮನ್ವಯ ಎಂದು ಸಾರಿದ ಶ್ರೀ ಬಸವಣ್ಣನವರು ಕಾಲಜ್ಞಾನಿ ಕೊಡೇಕಲ್ ಸುಕ್ಷೇತ್ರದಲ್ಲಿ   ಇಂದು ಯುಗಾದಿಯ ಮೊದಲನೆಯ ಪಚಾಂಗ ಪಠಣ ಜರಗಿತು. ಇಲ್ಲಿ ಎಲ್ಲಾ ಜಾತಿಜನಾಂಗದವರು ಮತ್ತು ರಾಜಾಮನೆತಂದವರು ಸಹ ಇದ್ದರು .

ಈ ವರ್ಷದ ಪಂಚಾಂಗವು ನದಿಗಳು ಮಳೆನೀರಿನಿಂದ ಬರ್ತಿ ತುಂಬಲ್ಪಾಡುವವು, ಈ ವರ್ಷ ಬೆಳೆಯು ಉತ್ತವವಾಗಿ ಬರುವವು, ಜನರು ಪ್ರಭಾಲ ಶಕ್ತಿ ಉಳ್ಳವರಾಗುವರು, ಸ್ತ್ರೀಯರು ಅಪಾರ ಸೌಖ್ಯವನ್ನು ಹೊಂಡುವರು ಸರ್ವರೂ ರೋಗಮುಕ್ತಾರಾಗಿ ನಿರ್ಭಯರಾಗಿ ಸೌಖ್ಯರಾಗುವರು, ಎಲ್ಲಾ ಧಾನ್ಯಗಳು ಸಾಕಷ್ಟು ದೊರೆಯುವವು, ರೋಗಭಯ, ಅಗ್ನಿಭಯ, ಚೋರರಭಯದಿಂದ ಪ್ರಜೆಗಳು ಪ್ರತಿಭಿಸುವರು, ಈ ವರ್ಷ ಜನರಲ್ಲಿ ವಿರಸ, ಭೋಗಾಪೇಕ್ಷ ಬೆಳೆಯುವವು, ಭಟೆ, ಎಣ್ಣೆ, ಬೆಣ್ಣೆ, ತುಪ್ಪಗಳು ಪ್ರೀತಿ ಹೆಚ್ಚಾಗುವುದು ಅಂದರೆ ಈ ಎಲ್ಲಾ ಪದಾರ್ಥಗಳು ಬೆಲೆ ಹೆಚ್ಚಾಗುವವು. ಜೊತೆಗೆ ಏಳು, ಉದ್ದ, ಸಾಸುವೆ, ಅತಿಹೆಚ್ಚಾಗಿ ಬೆಳೆಯುವವೂ ಎಂದು ತಿಳಿಸಿದರು ಹಾಗೆ ಎಲ್ಲಾ ಪಿಕುಗಳು ಉತ್ತಮವಾಗಿ ಬೆಳೆಯುವವು ಸಾಕಷ್ಟು ಮಳೆ ಆಗುವ ಸಾಧ್ಯತೆ ಇದೆ ಮುಂದಿನ ತಿಂಗಳು 14ಕ್ಕೆ ಹೊಸ ಮಳೆ ಅಶ್ವಿನಿ ಮಳೆ ಬರುವುದು ಎಂದು ತಿಳಿಸಿದರು .

ಈ ಸಂಧರ್ಭದಲ್ಲಿ ಪೀಠಧಿಪತಿಗಳಾದ ವೃಷಭೇಂದ್ರ ಅಪ್ಪನಾವರು, ರಾಜಾ ಜಿತೇಂದ್ರ ನಾಯಕ ಜಾಗೀರಧಾರ, ರಾಜಾ ವೆಂಕಟಪ್ಪ ನಾಯಕ್ ಜಾಗೀರದರ್, ಕಾರ್ತಿಕ ನಾಯಕ, ಶಾಮ್ ಸುಂದರ ಜೋಶಿ, ಹಾಗೂ ಮೀರಸ್ತೇದಾರರು, ಗುರುವರ್ಗ ಶಿಶುವರ್ಗದವರು ಉಪಸ್ಥಿತರಿದ್ದರು.

 ಜಿಲ್ಲಾ ವರದಿಗಾರರು : ಶಿವು ರಾಠೋಡ

Post a Comment

0Comments

Post a Comment (0)