ಸಾರಿಗೆ ಘಟಕ ವ್ಯವಸ್ಥಾಪಕರ ಕಿರುಕುಳಕ್ಕೆ ವಿಷ ಸೇವಿಸಿದ ಬಸ್ ಚಾಲಕ

Udayavani News
0
ಸಾರಿಗೆ ಘಟಕ ವ್ಯವಸ್ಥಾಪಕರ ಕಿರುಕುಳಕ್ಕೆ ವಿಷ ಸೇವಿಸಿದ ಬಸ್ ಚಾಲಕ

 

 ಲಿಂಗಸಗೂರು :  ಸ್ಥಳೀಯ ಸಾರಿಗೆ ಘಟಕದಲ್ಲಿ ಚಾಲಕನಿಗೆ ಡಬಲ್ ಡ್ಯೂಟಿಗೆ ಹೋಗಲು ಸಾರಿಗೆ ಘಟಕ ವ್ಯವ ಸ್ಥಾಪಕ ಸೂಚಿಸಿದ್ದರಿಂದ ಈರ್ವರ ನಡುವೆ ವಾಗ್ವಾದ ನಡೆದು ಮನ ನೊಂದ ಚಾಲಕ ವಿಷಸೇವಿಸಿದ ಘಟನೆ ಗುರುವಾರ ಜರುಗಿದೆ
ಲಿಂಗಸಗೂರು ಘಟಕದಲ್ಲಿ ಸುಮಾರು ವರ್ಷಗಳಿಂದ ಚಾಲಕ ನಾಗಿ ಕಾರ್ಯನಿರ್ವಹಿಸುತ್ತಿದ್ದ ಅಬ್ದುಲ್ (ಟೋ.ನಂ11) ಎನ್ನುವ ಚಾಲಕನು ಕಾರ್ಯನಿರ್ವಹಿಸಿ ಮರಳಿ ಘಟಕಕ್ಕೆ ಬಂದಾಗ ಪುನಃ ಡಬಲ್ ಡ್ಯೂಟಿಗೆ ಹೋಗುವಂತೆ ಸಾರಿಗೆ ಘಟಕ ವ್ಯವಸ್ಥಾಪಕ ರಾಹುಲ್ ವನಸೂರೆ ಸೂಚಿಸಿದಾಗ ಚಾಲಕ ಅಬ್ದುಲ್ ನಾನು ಈಗಾಗಲೆ ಡ್ಯೂಟಿಗೆ ಹೋಗಿ ಬಂದಿದ್ದು ಪುನಃ ರಾತ್ರಿ ಡ್ಯೂಟಿ ಗೆ ಒಬ್ಬನೆ ಹೋಗಲು ಆಗುವು ದಿಲ್ಲವೆಂದು ತಿಳಿಸಿದಾಗ ಇಬ್ಬರ ನಡುವೆ ವಾಗ್ವಾದ ನಡೆದು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ.ಅವಾಚ್ಯ ಶಬ್ದಗಳಿಂದ  ವ್ಯವಸ್ಥಾಪಕರು ನಿಂದಿಸಿದ್ದರಿಂದ ಮನ ನೊಂದ ಚಾಲಕ ಘಟಕದಲ್ಲಿಯೆ ವಿಷ ಸೇವಿಸಿದ ಘಟನೆ ಜರುಗಿದೆ.
ಕೂಡಲೆ ಘಟಕದ ಸಿಬ್ಬಂದಿಗಳು ಸ್ಥಳಿಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು ವೈದ್ಯರು ಪ್ರಾಥಮಿಕ ಚಿಕಿತ್ಸೆನೀಡಿ ಹೆಚ್ಚಿನ ಚಿಕಿತ್ಸೆ ಗೆ ಜಿಲ್ಲಾಸ್ಪತ್ರೆಗೆ ದಾಖಲಿ ಸಲು ವೈದ್ಯರು ಸೂಚಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಬ್ದುಲ್ ಮಾತನಾಡಿ, ನನಗೆ ಈಗಾಗಲೆ ಹೆಚ್ಚಿನ ವಯಸ್ಸಾಗಿದ್ದು ಡಬಲ್ ಡ್ಯೂಟಿ ಮಾಡಲು ಸಾಧ್ಯ ವಾಗುವುದಿಲ್ಲ ವೆಂದು ಹೇಳಿದ್ದಕ್ಕೆ ವ್ಯವಸ್ಥಾಪಕ  ರಾಹುಲ್ ವನಸೂರೆಯವರು
ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದನಿಂದಿಸಿರುವುದ ರಿಂದ ನನ್ನ ಮನಸಿಗೆ ಘಾಸಿ ಯಾಗಿದೆ ನಾನು ರಜೆ ಪಡೆಯದೆ ಕೆಲಸ ಮಾಡಿದ್ದು ಪುನಃ ರಾತ್ರಿ ಡ್ಯೂಟಿಗೆ ಹೋಗುವಂತೆ ಸೂಚಿಸಿದ್ದು, ನನಗೆ ಆಗುವುದಿಲ್ಲ ಎಂದು ಹೇಳಿ ದರೂ ಕೂಡ ನನ್ನ ಮೇಲೆ ಒತ್ತಡ ಹಾಕಿ ಡ್ಯೂಟಿಗೆ ಹೋಗಲೇಬೇಕೆಂದು  ಒತ್ತಾ ಯಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಪತ್ರಿಕೆಗೆ ತಿಳಿಸಿದರು

Post a Comment

0Comments

Post a Comment (0)