ತುಳುಜಾ ಭವಾನಿ ಮಂದಿರದಲ್ಲಿ 1 ಲಕ್ಷ ಕಡ್ಲೆ ಕಾಳಿ ನಿಂದ ಶಿವಲಿಂಗ.
ಲಿಂಗಸೂಗೂರು ಪಟ್ಟಣದ ತುಳುಜಾ ಭವಾನಿ ಮಂದಿರದಲ್ಲಿ 1 ಲಕ್ಷ ಕಡ್ಲೆ ಕಾಳಿ ನಿಂದ ಶಿವಲಿಂಗವನ್ನು ತಯಾರಿಸಿ ವಿನುತನವಾಗಿ ಮಹಾಶಿವರಾತ್ರಿ ಹಬ್ಬವನ್ನು ಸಂಭ್ರಮದಿಂದ ದೇವಸ್ಥಾನದ ಆಡಳಿತ ಮಂಡಳಿ ಪ್ರತಿವರ್ಷ ವಿಶೇಷವಾಗಿ ಆಚರಣೆ ಮಾಡುತ್ತ ಬಂದಿದ್ದಾರೆ ಬೆಳಗ್ಗೆಯಿಂದಲೇ ಶಿವನ ದರ್ಶನ ಪಡೆಯಲು ಭಕ್ತರು ದೇವಸ್ಥಾನಕ್ಕೆ ಆಗಮಿಸುತ್ತಿದ್ದಾರೆ. ಈ 1 ಲಕ್ಷ ಕಡ್ಲೆ ಕಾಳು ಬಳಸಿ ಶಿವಲಿಂಗ ಈ ಬಾರಿ ಅತ್ಯಾಕರ್ಷಕವಾಗಿ ಕಣ್ಮನ ಸಳೆಯುತ್ತಿದ್ದು, ನಗರದ ಜನತೆ ಕಡ್ಲೆಕಾಯಿ ಶಿವಲಿಂಗವನ್ನು ನೋಡಿ ವೈಶಿಷ್ಟತೆಗಳಿಂದ ಆರಾಧನೆ ಮಾಡಲಾಗುತ್ತದೆ. ಪ್ರತಿ ಬಾರಿ ವಿಭಿನ್ನವಾಗಿ ಶಿವಲಿಂಗ ತಯಾರಿಸುವ ಮೂಲಕ ತುಳುಜಾ ಭವಾನಿ ಮಂದಿರದ ಆಡಳಿತ ಮಂಡಳಿ ಗಮನ ಸೆಳೆಯುತ್ತಾರೆ. ಈ ಬಾರಿ ಕಡ್ಲೆಕಾಳು. ಈ ಭಾಗದ ರೈತರು ಬೆಳೆಯುವ ಪ್ರಮುಖ ಬೆಳೆಯಲ್ಲೊಂದು. ಹೀಗಾಗಿ ಬರೋಬ್ಬರಿ 1 ಲಕ್ಷ ಕಡ್ಲೆ ಕಾಳು ಬಳಕೆ ಮಾಡಿ ಶಿವಲಿಂಗ ಪ್ರತಿಷ್ಠಾಪನೆ ಮಾಡಲಾಗಿದೆ. ಅರಶಿಣ, ಕುಂಕುಮ ಮಿಶ್ರಿತವಾಗಿ ಶಿವಲಿಂಗವನ್ನು ಅಲಂಕಾರ ಮಾಡಲಾಗಿದ್ದು ನೋಡುಗರಿಗೆ ಭಕ್ತಿ-ಭಾವ ಉಕ್ಕಿಸುವಂತಿದೆ.
ಶಿವರಾತ್ರಿ ವಿಶೇಷ:ಇಂದು ನಾಡಿನೆಲ್ಲೆಡೆ ಶಿವರಾತ್ರಿ ಮಹೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಶಿವನ ನೆನೆಯುತ್ತಾ ಉಪವಾಸವಿದ್ದು ಆತನ ಆರಾಧನೆ ಮಾಡುವುದು ಹಿಂದೂಗಳಲ್ಲಿ ಮೊದಲಿನಿಂದಲೂ ಬಂದಿರುವ ಪದ್ಧತಿ. ಈ ದಿನದಂದು ತನ್ನನ್ನು ಪೂಜಿಸುವ ಭಕ್ತರಿಗೆ ತಾನು ವಿಶೇಷವಾಗಿ ಅನುಗ್ರಹಿಸುವುದಾಗಿ ಸ್ವತಃ ಶಿವನೇ ಜಗನ್ಮಾತೆ ಪಾರ್ವತಿ ದೇವಿಯ ಬಳಿ ಹೇಳಿಕೊಂಡಿರುವುದಾಗಿ ಶಿವ ಪುರಾಣ ತಿಳಿಸುತ್ತದೆ. ಜೊತೆಗೆ ಶಿವ-ಪಾರ್ವತಿ ವಿವಾಹವಾದ ಪವಿತ್ರ ದಿನ ಇದಾಗಿದೆ. ಹಿಮವಂತನ ಮಗಳು ಪಾರ್ವತಿ ದೇವಿ ಶಿವರಾತ್ರಿ ದಿನದಂದು ರಾತ್ರಿ ಇಡೀ ಶಿವನಾಮ ಪಠಿಸುತ್ತಾ ತಪಸ್ಸು ಮಾಡಿ ಪರಮಾತ್ಮನನ್ನು ಮೆಚ್ಚಿಸಿ ವಿವಾಹವಾದರು ಎಂಬುದಾಗಿ ಕಥೆಗಳು ಹೇಳುತ್ತವೆ.
ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕರಾದ ತಿರುಮಲರವು, ಕೃಷ್ಣ, ಗೌತಮ್ ಕುಮಾರ, ಅನಂದ ರಾವು ಅಶೋಕ, ದಶರಥರಾವು , ರಾಜೇಶ್, ಅಂಬಾಜಿ, ಸತ್ಯನಾರಾಯಣ, ಶಾಮಕುಮಾರ್, ಶಿಲ್ಪಾ, ಭಕ್ತಾದಿಗಳು ಉಪಸ್ಥಿತರಿದ್ದರು.