ಜಗದೀಶ್ ಶೆಟ್ಟರ್ ಬಿಜೆಪಿ ಟಿಕೆಟ್ ನೀಡಲು ಟಿ ಎ ಸಿ (ಬಿ.ಎಸ್.ಎನ್.ಎಲ್.) ಸದಸ್ಯ ಸಂಜೀವಕುಮಾರ ಕಂದಗಲ್ ಒತ್ತಾಯಒತ್ತಾಯ




ಉಪ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಲಿಂಗಸೂಗೂರು,ಏ.12 : ರಾಜ್ಯ ಕಂಡ ಅತ್ಯುತ್ತಮ ಮುಖ್ಯಮಂತ್ರಿ ಮುತ್ಸದ್ಧಿ ರಾಜಕಾರಣಿಗೆ ಬಿಜೆಪಿ ಟಿಕೆಟ್ ನೀಡಬೇಕೆಂದು ಟಿ ಎ ಸಿ (ಬಿ.ಎಸ್.ಎನ್.ಎಲ್.) ಸದಸ್ಯ ಸಂಜೀವಕುಮಾರ ಕಂದಗಲ್ ಒತ್ತಾಯಿಸಿದರು.

ಲಿಂಗಸುಗೂರ ಪಟ್ಟಣದ ಪತ್ರಿಕಾ ಭವನದ ಪತ್ರಿಕಾಗೋಷ್ಠಿಯಲ್ಲಿ ಟಿ ಎ ಸಿ (ಬಿ.ಎಸ್.ಎನ್.ಎಲ್.) ಸದಸ್ಯ ಸಂಜೀವಕುಮಾರ ಕಂದಗಲ್ ಮಾತನಾಡಿದ ಅವರು, ಹುಬ್ಬಳ್ಳಿ ಧಾರವಾಡ ಸೆಂಟರ್ ನಲ್ಲಿ ಕಳೆದ 35 ವರ್ಷಗಳಿಂದ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ಅಲ್ಲದೆ, ಬಿಜೆಪಿ ಸರ್ಕಾರದಲ್ಲಿ ಹಲವಾರು ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಇಂತಹ ರಾಜಕಾರಣಿಗೆ ಬಿಜೆಪಿ ಟಿಕೆಟ್ ನೀಡದಿರುವುದು ಖಂಡನೀಯ ಇದರಿಂದ ಪಕ್ಷಕ್ಕೆ ಹಿನ್ನಡೆಯುಂಟಾಗುತ್ತದೆ. ಕಾರಣ ಹಿರಿಯ ರಾಜಕಾರಣಿ ಜಗದೀಶ್ ಶೆಟ್ಟರ್ ರವರಿಗೆ ಬಿಜೆಪಿ ಟಿಕೆಟ್ ನೀಡುವುದರಿಂದ ಉತ್ತರ ಕರ್ನಾಟಕ ಲಿಂಗಾಯತ ಸಮುದಾಯ ಬಿಜೆಪಿ ಪಕ್ಷದ ಗೆಲುವಿಗೆ ಶ್ರಮಿಸುತ್ತಾರೆ. ಇಲ್ಲವಾದರೆ ಪಕ್ಷ ಸೋಲಿಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು. ಮುಖಂಡರಾದ ಅಯ್ಯಪ್ಪ ವಕೀಲರು, ಸಂಗಣ್ಣ, ಅಮರೇಶ, ಕಾಳಿಂಗ, ಸಂತೋಷ ಸೇರಿ ಇನ್ನಿತರರು ಇದ್ದರು.

Post a Comment

Previous Post Next Post