ದಿವ್ಯಚೇತನ ಟ್ರಸ್ಟ್‍ನಿಂದ 15 ಮಂದಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ




ಉಪ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಬೆಂಗಳೂರು,ಏಪ್ರಿಲ್ 05 : ದಿವ್ಯಚೇತನ ಚಾರಿಟಬಲ್ ಟ್ರಸ್ಟ್‍ನ ವತಿಯಿಂದ ನಯನ ಸಂಭಾಂಗಣದಲ್ಲಿ ನಡೆದ ವಾರ್ಷಿಕೋತ್ಸವ ಮತ್ತು ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ವಾಲ್ಮೀಕಿ ಆಶ್ರಮದ ಪೀಠಾಧಿಪತಿಗಳಾದ ಶ್ರೀ ಸಂಜಯಕುಮಾರ ಸ್ವಾಮೀಜಿ ಅವರು ಉದ್ಘಾಟಿಸಿದರು.

ಶಾಸಕರಾದ ಎಂ. ಕೃಷ್ಣಪ್ಪ ಅವರು ವಿವಿಧ ಕ್ಷೇತ್ರಗಳಲ್ಲಿ ಸಾಧನೆಮಾಡಿದ 15 ಮಂದಿಗೆ ಸಮಾಜ ಸೇವಾ ರತ್ನ ಪ್ರಶಸ್ತಿ ಪ್ರಧಾನಮಾಡಿದರು. ಹಿರಿಯ ಪತ್ರಕರ್ತರಾದ ಜಾಣಗೆರೆ ವೆಂಕಟರಾಮಯ್ಯ ಅವರು ದಿವ್ಯಚೇತನ ಚಾರಿಟಬಲ್ ಟ್ರಸ್ಟ್‍ನ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆಮಾಡಿದರು.

13 ವರ್ಷದ ಮಹಿಮಾ ಅವರು ಯೋಗಪಟುಗಳ ಮೂಲಕ ನೃತ್ಯ, ರಸಜ್ಞಾ ಅವರು ಭರತನಾಟ್ಯ ಪ್ರದರ್ಶನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
 
ಮುಖ್ಯ ಅತಿಥಿಗಳಾಗಿ ನಿವೃತ್ತ ಅಧಿಕಾರಿಗಳಾದ ಕೆ. ಎಸ್. ಮೃತ್ಯುಂಜಯ, ಟ್ರಸ್ಟಿನ ಅಧ್ಯಕ್ಷರಾದ ಎಂ. ರಾಮು, ಪತ್ರಕರ್ತರಾದ ಕೆಂಚನೂರು ಶಂಕರ್, ಬೆಂಗಳೂರು ನಗರ, ಅಬಕಾರಿ ಇಲಾಖೆ, ಉಪ ಆಯುಕ್ತರಾದ ಹಿರೇಮಠ್ ರವರು ಉಪಸ್ಥಿತರಿದ್ದರು.

Post a Comment

Previous Post Next Post