ಮಸ್ಕಿ ತಾಲೂಕು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೂತನ ಪದಾಧಿಕಾರಿಗಳ ಆಯ್ಕೆ


ಸಂಪಾದಕರು: ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಮಸ್ಕಿ, ನವೆಂಬರ್ 18 : ಮಸ್ಕಿ ತಾಲೂಕಿನ ನೂತನ ಪ್ರವಾಸಿ ಮಂದಿರದಲ್ಲಿ ಮಸ್ಕಿ ತಾಲೂಕ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳ ಆಯ್ಕೆಯನ್ನು ಜಿಲ್ಲಾ ಅಧ್ಯಕ್ಷರಾದ ಶರಣಪ್ಪ ಮರಳಿ, ರಾಮಯ್ಯ ಜವಳಗೆರ ಜಿಲ್ಲಾ ಉಪಾಧ್ಯಕ್ಷರು ಇವರ ನೇತೃತ್ವದಲ್ಲಿ ಮಸ್ಕಿ ತಾಲೂಕು ಪದಾಧಿಕಾರಿಗಳು ಆಯ್ಕೆ ಮಾಡಲಾಯಿತು.

ನೂತನ ಸದಸ್ಯರಾದ : ವೆಂಕಟೇಶ ಸೂಜಿ ತಾಲೂಕ ಅಧ್ಯಕ್ಷ, ಯಮನಪ್ಪ ಹಳ್ಳಿ ಗೌರವ ಅಧ್ಯಕ್ಷ, ಬಸನಗೌಡ ಎಮ್ ಪೊ. ಪಾ, ಕಾರ್ಯಾಧ್ಯಕ್ಷ, ಪಂಪನಗೌಡ ಮಾರಲದಿನ್ನಿ ಉಪಾಧ್ಯಕ್ಷ, ವೀರಭದ್ರಪ್ಪ ಕೆ ಬಸಾಪುರ ಉಪಾಧ್ಯಕ್ಷ, ಹನುಮಯ್ಯ ತೀರ್ಥಭಾವಿ ಸಂಘಟನಾ ಕಾರ್ಯದರ್ಶಿ, ದೇವಣ್ಣ ಮಾರಲದಿನ್ನಿ ಸಂಚಾಲಕ, ಬಾಲಪ್ಪ ಮ್ಯಾದರಾಳ ಪ್ರಧಾನ ಕಾರ್ಯದರ್ಶಿ, ಆಯ್ಕೆ ಆಗಿದ್ದಾರೆ ಎಂದು ಜಿಲ್ಲಾಧ್ಯಕ್ಷ ತಿಳಿಸಿದರು.

ನಂತರ ಮಾತನಾಡಿದ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ ಪ್ರತಿಯೊಬ್ಬ ಪದಾಧಿಕಾರಿಗಳು ರೈತ ಸಂಘ ಸಿದ್ದಾಂತ ಹಾಗೂ ಮೂಲತತ್ವಗಳ ಕಾನೂನಾತ್ಮಕ ಹೋರಾಟಗಳಲ್ಲಿ ಪಾಲ್ಗೊಂಡು ಹಗಲಿರುಳು ರೈತರಿಗಾಗಿ ಬಡವರಿಗಾಗಿ ಸಮಾಜಮುಖಿ ಕಾರ್ಯ ಪ್ರವೃತ್ತರಾಗಿ ಕರ್ತವ್ಯಗಳನ್ನು ನಿಭಾಯಿಸಬೇಕೆಂದು ತಿಳಿಸಿದರು. ಗ್ರಾಮೀಣ ಭಾಗದ ಪ್ರತಿಯೊಂದು ಹಳ್ಳಿಗಳಿಗೆ ಸಂಚರಿಸಿ ಆಯಾ ಭಾಗದ ಪ್ರತಿಯೊಂದು ಹಳ್ಳಿಗಳಿಗೆ ಸಂಚರಿಸಿ ರೈತರ ಆಶೋತ್ತರಗಳಿಗೆ ಸ್ಪಂದಿಸುವಂತೆ ಜಿಲ್ಲಾಧ್ಯಕ್ಷರು ತಿಳಿಸಿದರು.

ಈ ವೇಳೆ ರಾಮಯ್ಯ ಜವಳಗೇರಾ ಜಿಲ್ಲಾ ಉಪಾಧ್ಯಕ್ಷರು, ಹನುಮಂತ ಕೆ ಬಸಾಪುರ ಗ್ರಾಮ ಘಟಕ ಅಧ್ಯಕ್ಷರು, ಮರಿಯಪ್ಪ ರತ್ನಾಪುರ ಹಟ್ಟಿ ಗ್ರಾಮ ಘಟಕ ಅಧ್ಯಕ್ಷರು, ಹನುಮಂತ ತೀರ್ಥಬಾವಿ, ಹಾಗೂ ರೈತ ಮುಖಂಡರು ಭಾಗಿಯಾಗಿದ್ದರು.









Post a Comment

Previous Post Next Post