ಕಾಳಗಿ ತಾಲೂಕಿನ ವಿವಿಧ ಹಳ್ಳಿಗಳ ಮುಖಂಡರು ಜೆಡಿಎಸ್ ಸೇರ್ಪಡೆ

ಉಪ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಚಿಂಚೋಳಿ, ಏ 09 : ವಿಧಾನಸಭಾ ಮತಕ್ಷೇತ್ರದ ಕಾಳಗಿ ತಾಲೂಕಿನ ಟೆಂಗಳಿ ಮತ್ತು ಸೂಗುರ್ ಗ್ರಾಮದ ಪ್ರಮುಖರು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ಮೆಚ್ಚಿ ಪಕ್ಷದ ಅಭ್ಯರ್ಥಿ ಸಂಜೀವನ್ ಯಾಕಾಪೂರ ನೇತೃತ್ವದಲ್ಲಿ ಜನತಾ ದಳ ಪಕ್ಷಕ್ಕೆ ಸೇರ್ಪಡೆಯಾದರು.

ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಸೇರ್ಪಡೆಯಾದ ಭೀಮರಾಯ ಕೊರೆ ಶರಣಕುಮಾರ ಸದಾನಂದ ಮಲ್ಲಿಕಾರ್ಜುನ ಮೈಲ ಕಾಶಿನಾಥ ಕೊಟ್ಟಳ್ಳಿ ಮಲ್ಲಿಕಾರ್ಜುನ ಮಡ್ಕಿ ಸಚಿನ್ ಅಣವೀರ ಕೋರವಾರ ಪ್ರದೀಪ ಮಲ್ಲಿಕಾರ್ಜುನ ಮಡಕಿ ನಾಗರಾಜ ಮೇಲ್ ವೈಜಿನಾಥ ಬುಟ್ಟಿ ವಿದ್ಯಾಸಾಗರ ಅಂಕನ್ ಪುಟ್ಟರಾಜ ಸಾಸರಗಾಂವ್ ಪರಮೇಶ್ವರ ಅಂಕನ್ ಶ್ರೀಮಂತ ಸುನೀಲ ರೋಹಿತ ಕಾಳಗಿ ರಾಕೇಶ್ ತಿಪ್ಪಣ್ಣ ಗೌತಮ ಕಾಳಗಿ ಗುರುನಾಥ ರೆಡ್ಡಿ ನಾಗರೆಡ್ಡಿ ಸೇರಿದಂತೆ ಅನೇಕರಿಗೆ ಮುಖಂಡ ಸಂಜೀವನ್ ಜೆಡಿಎಸ್ ಶಾಲು ಹೊದಿಸಿ ಪಕ್ಷಕ್ಕೆ ಬರಮಾಡಿಕೊಂಡರು.

ಈ ಸಂದರ್ಭದಲ್ಲಿ ಪಕ್ಷದ ಕಾಳಗಿ ತಾಲೂಕಾಧ್ಯಕ್ಷ ಗೌರಿಶಂಕರ ಸೂರವಾರ ಚಿಂಚೋಳಿ ಅಲ್ಪ ಸಂಖ್ಯಾತ ಅಧ್ಯಕ್ಷ ಸೈಯದ್ ನಿಯಾಜಅಲಿ ಮುಖಂಡರಾದ ಸಿದ್ದು ಬುಬ್ಲಿ ವೀರೇಶ ಮಲ್ಕೂಡ ಚಂದ್ರಶೇಖರ ವಟ್ಟಾರ್ ಚಂದ್ರಕಾಂತ ರೇವಗಿ ಲಾಲಪ್ಪ ಹೋಳ್ಕರ್ ಮಂಜು ಜಂಬಗಿ ಮಾರುತಿ ಸಚಿನ್ ಸೇರಿದಂತೆ ಇತರರು ಹಾಜರಿದ್ದರು.

Post a Comment

Previous Post Next Post