ಕೊಡೆಕಲ್ ಗ್ರಾಮದಲ್ಲಿ ನಡೆದ ಹಲ್ಲೆಗೆ ಬಿಜೆಪಿ ಶಾಸಕ ರಾಜುಗೌಡ ಹಾಗೂ ಆತನ ಸಹೋದರ ಕಾರಣ. "ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ"



ಉಪ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ 
UDAYAVANI NEWS 
ಯಾದಗಿರಿ, ಏಪ್ರಿಲ್ 10 : ಜಿಲ್ಲೆಯಲ್ಲಿ ಸುರಪುರ ಮಾಜಿ ಶಾಸಕರು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ರಾಜಾ ವೆಂಕಟಪ್ಪ ನಾಯಕ ಹಾಗೂ ರಾಜಾ ಕೃಷ್ಣಪ್ಪ ನಾಯಕರು ಕೊಡೆಕಲ್ ಗ್ರಾಮದಲ್ಲಿ ಬಿಜೆಪಿ ಶಾಸಕರು ಹಾಗೂ ಬೆಂಬಲಿಗರು ನಡೆಸಿದ ಕೃತ್ಯದ ಬಗ್ಗೆ ಕಾಂಗ್ರೆಸ್ ಮುಖಂಡರು ಸಮ್ಮುಖದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಾವು ನಮ್ಮ ಪಾಡಿಗೆ ನಾರಾಯಣಪುರ ಗ್ರಾಮಕ್ಕೆ ಹೋಗುವಗ ಬಿಜೆಪಿ ಬೆಂಬಲಿಗರು ಏಕಾಏಕಿ ನಮ್ಮ ಗಾಡಿಗಳ ಮೇಲೆ ಕಲ್ಲು ತುರಿದರು. ಆದರೂ ನಮ್ಮ ಬೆಂಬಲಿಗರ ಜೊತೆ ಶಾಂತಿಯುತವಾಗಿ ನಾರಾಯಣಪುರ ಗ್ರಾಮಕ್ಕೆ ಮುನ್ನಡೆದು, ಮತ್ತೆ ಬರುವಾಗ ಎಲ್ಲಾ ಮಾರಕಾಸ್ತ್ರಗಳನ್ನು ಬಳಸಿ ನಮ್ಮ ಮೇಲೆ ನಮ್ಮ ಬೆಂಬಲಿಗರ ಮೇಲೆ ಹಲ್ಲೆ ಮಾಡಿ ಕಾರುಗಳನ್ನು ಜಕ್ಕಂ ಗೋಳಿಸಿ ನಮ್ಮ ಮೇಲೆ ಆರೋಪ ಮಾಡಿ ನಮ್ಮ ಮೇಲೆ ಕೇಸ್ ಹಾಕಿದ್ದಾರೆ. ಇದು ಶುದ್ಧ ಸುಳ್ಳು ಇದಕ್ಕೆ ನೇರ ಹೊಣೆ ಬಿಜೆಪಿ ಶಾಸಕ ರಾಜುಗೌಡ ಮತ್ತು ಆತನ ಸಹೋದರ ಬಬ್ಲುಗೌಡ ಎಂದು ದೂರಿದರು. ಈ ಸಂದರ್ಭದಲ್ಲಿ ಹಿರಿಯ ಮುಖಂಡರು ಶ್ರೀ ವಿಠಲ್ ಯಾದವ್ , ಹಾಗೂ ಯಾದಗಿರಿ ಜಿಲ್ಲೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸುರಪುರ & ಹುಣಸಿಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಹಾಗೂ ರವಿಚಂದ್ರನ್ ಆನಂದ ಸಾಹುಕಾರ, ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಕಾಂಗ್ರೆಸ್ ಪಕ್ಷದ ಮುಖಂಡರು,ಉಪಸ್ಥಿತರಿದ್ದರು.

Post a Comment

Previous Post Next Post