UDAYAVANI NEWS
ಬೆಂಗಳೂರು, ಮಾರ್ಚ್ 24 : ಜನತಾ ಪಕ್ಷದ ನೇಗಿಲು ಹೊತ್ತ ರೈತನ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜಯ ಪ್ರಕಾಶ್ ಬಂಧು ಹಾಗೂ ರಾಜ್ಯಾಧ್ಯಕ್ಷರಾದ ಡಾ|| ಬಿ ಟಿ ಲಲಿತಾ ನಾಯಕ್ ರವರ ಆದೇಶದ ಮೇರೆಗೆ ಬೆಂಗಳೂರು ನಗರ ವಿಧಾನ ಸಭಾ ಕ್ಷೇತ್ರ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದೆ.
1. ಬಿ ಎನ್ ಗೋಪಾಲಕೃಷ್ಣ, ರಾಜಾಜಿನಗರ ವಿಧಾನಸಭಾ ಕ್ಷೇತ್ರ 165, 2. ನಾಗರಾಜ್, ವಿಜಯನಗರ ವಿಧಾನಸಭಾ ಕ್ಷೇತ್ರ 167,
3. ಎ ರಾಜ್, ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರ 166,
4. ಅಬ್ದುಲ್ ರೌಫ್, ಗಾಂಧೀನಗರ ವಿಧಾನಸಭಾ ಕ್ಷೇತ್ರ 164,
5. ಈಶ್ವರ್, ಬ್ಯಾಟರಾಯನ ಪುರ ವಿಧಾನಸಭಾ ಕ್ಷೇತ್ರ 152,
6. ಅಬ್ದುಲ್ ಬಶೀರ್, ಹೆಬ್ಬಾಳೆ ವಿಧಾನಸಭಾ ಕ್ಷೇತ್ರ 158,
7. ಚಂದ್ರ ಶೇಖರ್, ಕೆ ಆರ್ ಪುರ ವಿಧಾನಸಭಾ ಕ್ಷೇತ್ರ 151.
8, ಸಂದೀಪ್ ಎ, ಪುಲಕೇಶಿ ನಗರ ವಿಧಾನಸಭಾ ಕ್ಷೇತ್ರ 174
9. ಸಂತೋμï ಕುಮಾರ್, ರಾಜ ರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ 154.
10.ದಿಲೀಪ್ ಕುಮಾರ್ ಸರ್ವಜ್ಞ ನಗರ ವಿಧಾನಸಭಾ ಕ್ಷೇತ್ರ 160
11. ಎಂ ಸ್ನೇಹ, ದಾಸರಹಳ್ಳಿ ವಿಧಾನಸಭಾ ಕ್ಷೇತ್ರ 155,
12. ನಳಿನಿ ಗೌಡ, ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ 156,
13. ಶಿವಕುಮಾರ್ ಎಂ, ಮಲ್ಲೇಶ್ವರ ವಿಧಾನಸಭಾ ಕ್ಷೇತ್ರ 157
14. ಉದಯ ಶಂಕರ್ ಜಿ, ಯಶವಂತಪುರ ವಿಧಾನಸಭಾ ಕ್ಷೇತ್ರ 153,
ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಮತದಾರರನ್ನು ತಮ್ಮ ಕಡೆಗೆ ಓಲೈಸಿಕೊಳ್ಳಲು ಟಿವಿ, ಫ್ರಿಡ್ಜ್, ಕುಕ್ಕರ್, ಸೀರೆಗಳು, ಹಣ ಹಂಚುವುದರ ಮುಖಾಂತರ ಮತದಾರರನ್ನು ಭ್ರಷ್ಟರ ಕೂಪಕ್ಕೆ ತಳ್ಳುತ್ತಿದೆ. ಪ್ರಜಾ ಪ್ರಭುತ್ವವನ್ನು ಕಗ್ಗೋಲೆ ಮಾಡುತ್ತಿದೆ. ಇಂತಹ ನೀಚ ಸಂಸ್ಕøತಿಯನ್ನು ಬೆಳೆಸಿಕೊಂಡ ಪಕ್ಷಗಳಿಗೆ ಜನರು ತಕ್ಕ ಪಾಠ ಕಲಿಸಬೇಕಾಗಿದೆ ಎಂದು ಅಧ್ಯಕ್ಷ ಬಿ ಎನ್ ಗೋಪಾಲಕೃಷ್ಣ ತಿಳಿಸಿದ್ದಾರೆ.
ಇದರ ಬಗ್ಗೆ ಚುನಾವಣಾ ಆಯೋಗವು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳ ಬೇಕೆಂದು ಜನತಾ ಪಕ್ಷದಿಂದ ಒತ್ತಯಿಸುತ್ತಿದ್ದೇವೆ. ಇತಿಹಾಸವಿರುವಂತಹ ನೇಗಿಲು ಹೊತ್ತ ರೈತನ ಜನತಾ ಪಕ್ಷ ಮತ್ತೆ ಮರುಕಳಿಸುತ್ತಿದೆ. ಜನತಾ ಪಕ್ಷ ಜನಪರವಾದ ಕೆಲಸ ಮಾಡಲು ಬರುತ್ತಿದೆ. 2023 ರ ಚುನಾವಣೆಯಲ್ಲಿ ಜನತಾ ಸರ್ಕಾರ ಬರುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು.
ಬೆಂಗಳೂರು ನಗರ ಅಧ್ಯಕ್ಷ ಕೆ ಎಂ ಪಾಲಾಕ್ಷಯ್ಯ, ರಾಜ್ಯ ಸದಸ್ಯತ್ವ ಸಮಿತಿ, ಅಬ್ದುಲ್ ರೌಫ್ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಕಛೇರಿ ಉಸ್ತುವಾರಿ, ಭೋಜರಾಜ್ ಉಪಾಧ್ಯಕ್ಷರು: ಬೆಂಗಳೂರು ನಗರ, ಎಸ್ ಕೋಮದನ್ ಪ್ರಧಾನ ಕಾರ್ಯದರ್ಶಿ: ಬೆಂಗಳೂರು ನಗರ, ಎ ರಾಜ್ ಅಧ್ಯಕ್ಷರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ, ನಳಿನಿ ಗೌಡ ರಾಜ್ಯ ಸಂಘಟನಾ ಕಾರ್ಯದರ್ಶಿ ಅವರು ಭಾಗವಹಿಸಿದ್ದರು.
Tags
ರಾಜ್ಯ ಸುದ್ದಿಗಳು