ಸುರೇಶ ಬಳಗಾನೂರು ಅತಿಥಿ ಉಪನ್ಯಾಸಕರ ಸಂಘದ ನೂತನ ಅಧ್ಯಕ್ಷರಾಗಿ ಅವಿರೋಧ ಆಯ್ಕೆ



ಸುದ್ದಿ ಸಂಪಾದಕರು : ಗ್ಯಾನಪ್ಪ ದೊಡ್ಡಮನಿ
UDAYAVANI NEWS 
ಮಸ್ಕಿ, ಫೆಬ್ರುವರಿ 16 : ಮಸ್ಕಿಯ ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮದರ್ಜೆ ಕಾಲೇಜಿನ 2022-23 ನೇ ಸಾಲಿನ ಪ್ರಥಮ ಅತಿಥಿ ಉಪನ್ಯಾಸಕರ ಸಭೆಯನ್ನು ಬುಧುವಾರ ಮಧ್ಯಾಹ್ನ 1-30 ಕ್ಕೆ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಶ್ರೀ ರಾಮಣ್ಣ ನಾಯಕರ ನೇತೃತ್ವದಲ್ಲಿ
ದೇವನಾಂಪ್ರಿಯ ಅಶೋಕ ಸರಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕರ ಕಾರ್ಯಾಲಯದಲ್ಲಿ ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆಯನ್ನು ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆಮಾಡಲಾಯಿತು.


ನೂತನ ಸಂಘದ ಗೌರವಾಧ್ಯಕ್ಷರನ್ನಾಗಿ ರಾಜ್ಯಶಾಸ್ತ್ರದ ಹಿರಿಯ ಅತಿಥಿ ಉಪನ್ಯಾಸಕರಾಗಿರುವ ಶ್ರೀ ಡಿ.ಕೆ. ಮುಜಾವರವರನ್ನು ಹಾಗೂ ಅಧ್ಯಕ್ಷರನ್ನಾಗಿರಾಜ್ಯಶಾಸ್ತ್ರ ಉಪನ್ಯಾಸಕರಾಗಿರುವ ಸುರೇಶ ಬಳಗಾನೂರು ರವರನ್ನು ಮತ್ತುಇತಿಹಾಸ ಉಪನ್ಯಾಸಕರಾಗಿರುವ ಶ್ರೀ ಚನ್ನಬಸವ ವಸ್ತ್ರದ್ ರವರನ್ನು ಉಪಾಧ್ಯಕ್ಷರನ್ನಾಗಿ 
ಮತ್ತು ಆಂಗ್ಲ ಭಾಷಾ ಉಪನ್ಯಾಸಕಿಯಾಗಿರುವ ಶ್ರೀಮತಿ ಅಶ್ವಿನಿಯವರನ್ನು ಪ್ರಧಾನ ಕಾರ್ಯದರ್ಶಿಗಳನ್ನಾಗಿ,
ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾಗಿರುವ ಶ್ರೀ ಚನ್ನನಗೌಡರವರನ್ನು ಕೋಶಾಧ್ಯಕ್ಷರನ್ನಾಗಿ ಆಯ್ಕೆಮಾಡಲಾಯಿತು.

ಈ ಸಂದರ್ಭದಲ್ಲಿ ಅತಿಥಿ ಉಪನ್ಯಾಸಕರಾದ ಶ್ರೀ ಪ್ರಭುದೇವ ಸಾಲಿಮಠ, ಡಾ.ಪಂಪಾಪತಿ ನಾಯಕ, ಶ್ರೀ ಹುಚ್ಚೇಶ ನಾಗಲೀಕರ, ಶ್ರೀವೀರನಗೌಡ,ಶ್ರೀ ಅಮರಣ್ಣ, ಶ್ರೀ ಶರಣಬಸವ ಹಿರೇಮಠ, ಶ್ರೀ ಸುಭಾಷ ಹರ್ವಾಪೂರ, ಕು.ಶ್ರೀದೇವಿ ಮುಂತಾದವರು ಇದ್ದರು.

Post a Comment

Previous Post Next Post