ರಾಜ್ಯಗಳ ತೆರಿಗೆ ಪಾಲನ್ನು ಕಡಿತ ಮಾಡುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ

Udayavani News
0
ರಾಜ್ಯದ ಬಿಜೆಪಿ ನಾಯಕರಿಗೆ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲವೇ?


ಬೆಂಗಳೂರ ಫೆ 28 : ರಾಜ್ಯಗಳ ಗಾಯದ ಮೇಲೆ ಬರೆ ಎಳೆದಿದ್ದಲ್ಲದೆ, ಬಿಸಿನೀರನ್ನೂ ಸುರಿಯುತ್ತಿದೆ ಕೇಂದ್ರ ಸರ್ಕಾರ.
ಈಗಾಗಲೇ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ, ತೆರಿಗೆ ಪಾಲಿನಲ್ಲಿ ಕರ್ನಾಟಕಕ್ಕೆ ದ್ರೋಹವಾಗುತ್ತಿದೆ.

ಈಗ ತೆರಿಗೆ ಪಾಲಿನ ಹಂಚಿಕೆಯಲ್ಲಿ ರಾಜ್ಯಗಳ ಪಾಲನ್ನು ಕಡಿತಗೊಳಿಸಲು ಹಣಕಾಸು ಆಯೋಗಕ್ಕೆ ಕೋರಿಕೆ ಸಲ್ಲಿಸಲು ಮುಂದಾಗಿದೆ, ಇದರಿಂದ ಅತಿ ಹೆಚ್ಚು ಅನ್ಯಾಯಕ್ಕೋಳಗಾಗುವುದು ದಕ್ಷಿಣ ರಾಜ್ಯಗಳು, ಅದರಲ್ಲೂ ಕರ್ನಾಟಕ.

ಹಂತ ಹಂತವಾಗಿ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹಾಗೂ ಆರ್ಥಿಕ ಸ್ವಾತಂತ್ರ್ಯವನ್ನು ಕಸಿಯುವ ಕೇಂದ್ರ ಸರ್ಕಾರದ ಈ ದುಷ್ಟ ನಡೆಗೆ ರಾಜ್ಯದ ಬಿಜೆಪಿ ನಾಯಕರ ಮೌನವು ಅವರ ಜನದ್ರೋಹವನ್ನು ಸಾಬೀತು ಮಾಡುತ್ತದೆ.

ರಾಜ್ಯ ಸರ್ಕಾರವನ್ನು ಪ್ರಶ್ನಿಸುವ ಮಾನ್ಯ @RAshokaBJP ಅವರೇ,
ರಾಜ್ಯಗಳ ಅನುದಾನ ಕಡಿತದ ತೀರ್ಮಾನದ ಬಗ್ಗೆ ತಾವೇಕೆ ನಿಮ್ಮ ಮೋದಿಯವರನ್ನು ಪ್ರಶ್ನಿಸಬಾರದು.

ರಾಜ್ಯದಿಂದಲೇ ಆಯ್ಕೆಯಾಗಿರುವ ಶ್ರೀಮತಿ @nsitharaman ಅವರನ್ನು ರಾಜ್ಯ ಬಿಜೆಪಿ ನಿಯೋಗವು ಭೇಟಿಯಾಗಿ ಈ ತೀರ್ಮಾನದಿಂದ ಹಿಂದೆ ಸರಿಯಲು ಏಕೆ ಒತ್ತಾಯಿಸುತ್ತಿಲ್ಲ? 

ಕುರ್ಚಿ ಕಿತ್ತಾಟಕ್ಕಾಗಿ ದಿನಕ್ಕೊಬ್ಬೊಬ್ಬರು ದೆಹಲಿ ಯಾತ್ರೆ ಮಾಡುವ @BJP4Karnataka ನಾಯಕರು ರಾಜ್ಯದ ಹಿತಾಸಕ್ತಿಯ ವಿಷಯದಲ್ಲಿ ದೆಹಲಿ ನಾಯಕರನ್ನು ಭೇಟಿಯಾಗುವುದಿಲ್ಲವೇಕೆ?

ಬಿಜೆಪಿ ನಾಯಕರೇ, ನಿಮಗೆ ಕರ್ನಾಟಕದ ಹಿತಾಸಕ್ತಿ ಮುಖ್ಯವೊ, ನಿಮ್ಮ ರಾಜಕೀಯ ಹಿತಾಸಕ್ತಿ ಮುಖ್ಯವೋ?
ರಾಜ್ಯದ ಏಳಿಗೆಗೆ ಕೇಂದ್ರ ಸರ್ಕಾರ ಪೆಟ್ಟು ನೀಡುತ್ತಿದ್ದರೂ ನಡುಬಗ್ಗಿಸಿ ಶರಣಾಗತಿ ಸೂಚಿಸುವುದನ್ನು “ಜನದ್ರೋಹಿ ಗುಲಾಮಗಿರಿ“ ಎನ್ನದೆ ಬೇರೆ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ.

ದೇಶದ ಬೆಳವಣಿಗೆಯಲ್ಲಿ ರಾಜ್ಯಗಳ ಪಾತ್ರ ಪ್ರಮುಖವಾಗಿರುತ್ತದೆ, ಜನಹಿತದ ಯೋಜನೆಗಳ ಜಾರಿ ಮಾಡುವುದು ರಾಜ್ಯಗಳ ಹೊಣೆಗಾರಿಕೆ, ರಾಜ್ಯದ ಸಂಪನ್ಮೂಲವನ್ನು ಕೇಂದ್ರ ಸರ್ಕಾರ ಹೀಗೆ ಕೊಳ್ಳೆ ಹೊಡೆದರೆ ರಾಜ್ಯ ಸರ್ಕಾರಗಳು ಏಕಿರಬೇಕು? ಏನು ಮಾಡಬೇಕು?
ಬಿಜೆಪಿಗರಿಗೆ ಈ ಪ್ರಶ್ನೆಗಳು ಉದ್ಭವಿಸುವುದಿಲ್ಲವೇ? ಎಂದು ಕೇಳಿದ್ದಾರೆ.

Post a Comment

0Comments

Post a Comment (0)